ಚರ್ಮ ರೋಗದಿಂದ ಬಳಲುತ್ತಿರುವವರು ನೆಲ್ಲಿ ತೀರ್ಥ ಎಂದೇ ಕರೆಯುವ ಈ ಶಿವನ ದೇವಾಲಯಕ್ಕೆ ಭೇಟಿ ನೀಡಿ ಸ್ನಾನ ಮಾಡಿ..!
ನಾವು ಹಲವಾರು ಶಿವನ ದೇವಾಲಯಗಳನ್ನು ನೋಡಿದ್ದೇವೆ ಆದರೆ ಈ ಸೋಮೇಶ್ವರನ ದೇವಾಲಯ ಬಹಳ ವಿಶಿಷ್ಟವಾಗಿದೆ. ಈ ನೆಲ್ಲಿ ತೀರ್ಥ ಸೋಮೇಶ್ವರ ದೇವಾಲಯ ಇರುವುದು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬಳಿಯಿದೆ.
ಈ ದೇವಾಲಯದ ವಿಶೇಷತೆಯೇನೆಂದರೆ ಇದು ಒಂದು ಗುಹೆ ಒಳಗೆ ಇರುವ ಗುಹಾಂತರ ದೇವಾಲಯವಾಗಿದೆ ಆದ್ದರಿಂದ ಇದನ್ನು ಶ್ರೀ ನೆಲ್ಲಿ ತೀರ್ಥ ಸೋಮೇಶ್ವರ ಗುಹಾಂತರ ದೇವಾಲಯ ಎಂದು ಕರೆಯುತ್ತಾರೆ. ಇದರ ಇತಿಹಾಸದ ಬಗ್ಗೆ ತಿಳಿಯುವುದಾದರೆ ಇದು ಅತ್ಯಂತ ಪ್ರಾಚೀನವಾದ ಸುಮಾರು 1487 ಕ್ಕಿಂತ ಪುರಾತನವಾದುದು ಎಂದು ಹೇಳಲಾಗುತ್ತಿದೆ, ಇದು ರಮಣೀಯವಾದ ಪ್ರಕೃತಿಯ ನಡುವೆ ಇರುವ ಈ ದೇವಾಲಯವನ್ನು ನೋಡುವುದೇ ಒಂದು ಪುಣ್ಯ ಯಾಕೆಂದರೆ ಇಲ್ಲಿ ಒಂದು ಗುಹೆಯಿದ್ದು ಅದರ ಒಳಗೆ ನೆಲ್ಲಿಕಾಯಿ ಗಾತ್ರದ ನೀರು ಸದಾ ಬರುತ್ತಿರುತ್ತದೆ ಆದ್ದರಿಂದ ಇದಕ್ಕೆ ನೆಲ್ಲಿ ತೀರ್ಥ ಎಂದು ಹೆಸರು ಬಂದಿದೆ.
ಇದು ಸುಮಾರು ೨೦೦ ಮೀಟರ್ ಉದ್ದವಿರುವ ಈ ಗುಹೆಯೊಳಗೆ ಹೋಗಲು ನೀರಿನಲ್ಲಿ ಹೋಗಬೇಕು ಒಳಗೆ ವಿಶಾಲವಾದ ಸರೋವರೋಪಾದಿಯಲ್ಲಿದ್ದು ಇಲ್ಲಿರುವ ಮಣ್ಣನ್ನು ಮೈಗೆ ಹಚ್ಚಿಕೊಂಡು ಸ್ನಾನ ಮಾಡಿದರೆ ಚರ್ಮ ರೋಗಗಳು ವಾಸಿಯಾಗುತ್ತವೆ ಎಂಬ ಪ್ರತೀತಿ ಇದೆ ಮತ್ತು ಗುಹೆಯಿಂದ ಹೊರಗಡೆ ಬರುವಾಗ ಶಿವಲಿಂಗಕ್ಕೆ ಪೂಜೆ ಸಲ್ಲಿಸಿ ಬರಬಹುದಾಗಿದೆ. ಇಲ್ಲಿ ಸಾಮಾನ್ಯವಾಗಿ ಮಳೆಗಾಲದಲ್ಲಿ ಈ ಗುಹಾಲಯದ ಒಳಗೆ ಭಕ್ತರಿಗೆ ಪ್ರವೇಶವನ್ನು ನಿಷೇದಿಸಲಾಗಿದೆ.
ಮಂಗಳೂರು ಬಳಿ ಇರುವ ತೀರ್ಥ ನಲ್ಲಿ ದೇಗುಲಕ್ಕೆ ಒಮ್ಮೆ ಹೋಗಿ ನಿಮ್ಮ ಎಲ್ಲ ರೀತಿಯ ಚರ್ಮ ರೋಗಗಳನ್ನು ವಾಸಿಮಾಡಿಕೊಳ್ಳಿ ಹಾಗೆ ಶಿವನ ಕೃಪೆಗೆ ಪಾತ್ರರಾಗಿ ಶಿವ ನಿಮಗೆ ಒಳ್ಳೆಯದನ್ನು ಮಾಡಲಿದ್ದಾನೆ ಅನ್ನೋ ನಂಬಿಕೆ ಈ ಕ್ಷೇತ್ರದಲ್ಲಿ ಹೆಚ್ಚಾಗಿದೆ.