ನಿಶ್ಚಿತಾರ್ಥವಾಗಿದ್ದ ಹುಡುಗನನ್ನು,ತಂದೆ ತಾಯಿಯನ್ನು ಬಿಟ್ಟು ಫೋನಿನಲ್ಲಿ ಪರಿಚಯವಾದವನನ್ನು ಮದುವೆಯಾದ ಪೂಜಾಳಿಗೆ ಕಾದಿತ್ತು ಶಾಕ್
16 ನೇ ವಯಸ್ಸು ಬಾಲ್ಯ ಮತ್ತು ಯೌವನದ ಮಹಾಸಂಕ್ರಮಣ ಕಾಲ ಇದು. ಸಾಧಿಸುವುದಕ್ಕೂ, ಹಾದಿ ತಪ್ಪುವುದಕ್ಕೂ ಆಸ್ಪದ ಕಲ್ಪಿಸುತ್ತದೆ. ಮನುಷ್ಯನ ಆಯುಷ್ಯದಲ್ಲಿ ಹದಿನಾರನೆಯ ವಯಸ್ಸಿನ ಬಗ್ಗೆ ಇರುವ, ಅಚ್ಚರಿ, ಆದರ, ಅಭಿಪ್ರಾಯಗಳು ವ್ಯಕ್ತಿ ಬದುಕಿನ ಮಿಕ್ಕ ಯಾವ ಅವಧಿಗೂ ಇಲ್ಲವೆನ್ನಬಹುದು. ತಮ್ಮ ಮಕ್ಕಳು ಹದಿನಾರನೆಯ ವಯಸ್ಸಿಗೆ ಕಾಲಿಟ್ಟಾಗ ಸಂಭ್ರಮಿಸುವ ಕುಟುಂಬಗಳು ಬೇಕಾದಷ್ಟು. ಆಗಂತೂ ಉಡುಗೊರೆ, ಉಪಚಾರ, ಉಪದೇಶಗಳಿಗೆ ಕೊರತೆಯೇ ಇರದು. ಕಾನೂನಿನ ದೃಷ್ಟಿಯಿಂದಲೂ ಸಹ ಇದೊಂದು ಮಹತ್ವದ ಘಟ್ಟವೆನ್ನುವುದುಂಟು.
ಜಾಹಿರಾತುದಾರರು, ಮನರಂಜನೆಯ ಮಾಧ್ಯಮದವರಿಗಂತೂ ಹೆಣ್ಣುಮಕ್ಕಳ ಹದಿನಾರನೆಯ ವಯಸ್ಸು ಲಾಭ ತರುವ ಕಾಲ. ಅಂದಚೆಂದ, ಉಡುಪು ವೈಯಾರವನ್ನು ಬಿಂಕದಿಂದ ಪ್ರದರ್ಶಿಸುವುಂತೆ ಮಾಡಿ ಪ್ರಚಾರ ಮಾಡುವ ಸಮಯ. ಹಾಗೆಯೇ ಹದಿನಾರನೆಯ ವಯಸ್ಸನ್ನು ಸಂಭ್ರಮದಿಂದ ಸ್ವಾಗತಿಸುವುದರ ಮೂಲಕ ವಯಸ್ಕತನದ ಪೂರ್ವಸಿದ್ಧತೆ ಎಂದು ಭಾವಿಸುವ ಮಕ್ಕಳು ಇದ್ದಾರೆ. ಬಾಲ್ಯ ಮುಗಿಯಿತು, ಕಷ್ಟ ಕಾರ್ಪಣ್ಯಗಳನ್ನು ಎದುರಿಸಬಹುದಾದ ವಯಸ್ಸೆಂದು ಹೊಣೆಗಾರಿಕೆಯಿಂದ ಹೆಜ್ಜೆ ಇಡುವವರೂ ಇದ್ದಾರೆ.
ಫೋನ್ನಲ್ಲಿ ಪರಿಚಯವಾಗಿದ್ದ ಯುವಕನನ್ನು ಪ್ರೀತಿಸಿ ಕಳೆದ ಐದು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಯುವತಿ ಹೇಮಾವತಿ ನದಿಗೆ ಹಾರಿ ಆತ್ಮಹ@ಗೆ ಶರಣಾಗಿದ್ದಾಳೆ. ಈ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಘಟನೆ ನಡೆದಿದೆ. ಚನ್ನರಾಯಪಟ್ಟಣ ತಾಲೂಕಿನ ಬೆಕ್ಕ ಗ್ರಾಮದ ಪೂಜಾ(20) ಆತ್ಮಹ@ಗೆ ಶರಣಾದ ಗೃಹಿಣಿ. ಪೂಜಾಳಿಗೆ ಈ ಹಿಂದೆ ಬೇರೊಬ್ಬ ಹುಡುಗನ ಜೊತೆ ನಿಶ್ಚಿತಾರ್ಥವಾಗಿತ್ತು. ಆದರೆ ಫೋನ್ನಲ್ಲಿ ಪರಿಚಯವಾಗಿದ್ದ ಸಕಲೇಶಪುರ ಮೂಲದ ದೀಪಕ್ನ್ನು ಪೂಜಾ ಪ್ರೀತಿಸುತ್ತಿದ್ದಳು.
ಹೀಗಾಗಿ ಮನೆಯವರನ್ನು ವಿರೋಧಿಸಿ ದೀಪಕ್ ಜೊತೆ ಓಡಿ ಬಂದಿದ್ದ ಪೂಜಾ, ಕಳೆದ ಮಾರ್ಚ್ 20 ರಂದು ಮದುವೆಯಾಗಿದ್ದಳು. ಮದುವೆ ನಂತರ ದೀಪಕ್ ಮತ್ತು ಆಕೆಯ ಮನೆಯವರು ನಿತ್ಯವೂ ವರದಕ್ಷಿಣೆ ಕಿರು@ಳ ನೀಡುತ್ತಿದ್ದರು. ನಿತ್ಯವೂ ದೈಹಿಕ ಹ’ ಲ್ಲೆ ನಡೆಸಿ ಹಿಂ’ ಸೆ ನೀಡುತ್ತಿದ್ದರು. ಹೀಗಾಗಿ ಇಂದು ಪೂಜಾ ಹೇಮಾವತಿ ನದಿಗೆ ಹಾರಿ ಆತ್ಮಹ@ಗೆ ಶರಣಾಗಿದ್ದಾಳೆ ಎಂದು ಪೂಜಾ ಪೋಷಕರು, ಆಕೆಯ ಪತಿ ದೀಪಕ್ ವಿರುದ್ಧ ಆರೋಪ ಮಾಡಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಆಗಮಿಸಿ ಪೂಜಾಳ ಮೃತದೇಹಕ್ಕಾಗಿ ಶೋಧ ನಡೆಸಿದ್ದಾರೆ. ಸ್ಥಳದಲ್ಲಿ ಮೃತ ಪೂಜಾಳ ಪೋಷಕರು, ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ಸಕಲೇಶಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.