ಸಾಕಷ್ಟು ವಿವಾದಗಳಿಗೆ ಗುರಿಯಾದರೂ ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ದೇಶನದ ಮಲ್ಲ ಚಿತ್ರ ಇಷ್ಟ ಎಂದ ಪ್ರಿಯಾಂಕ ಉಪೇಂದ್ರ
ಎರಡು ದಶಕಗಳಲ್ಲಿ ಪ್ರಿಯಾಂಕಾ ಉಪೇಂದ್ರ ನಟಿಸಿದ ಸಿನಿಮಾಗಳ ಸಂಖ್ಯೆ ಸುಮಾರು ನಲವತ್ತರಷ್ಟು ಆಗಬಹುದು. ಬಂಗಾಳಿ ಭಾಷೆಯ ಮೂಲಕ ತಮ್ಮ ವೃತ್ತಿ ಬದುಕು ಆರಂಭಿಸಿದ ಅವರು ಹಿಂದಿ, ತೆಲುಗು, ಕನ್ನಡ, ತಮಿಳು ಮತ್ತು ಒರಿಯಾ ಭಾಷೆಗಳಲ್ಲಿ ನಟಿಸಿದ್ದಾರೆ. ಇಂದಿಗೂ ಕನ್ನಡದಲ್ಲಿ ಉತ್ತಮ ಹೆಸರನ್ನು ಬೇಡಿಕೆಯನ್ನು ಇರಿಸಿಕೊಂಡಿದ್ದಾರೆ. ಇಷ್ಟೆಲ್ಲದರ ಮಧ್ಯೆಯೂ ತಮ್ಮ ನೆಚ್ಚಿನ ಸಿನಿಮಾ ‘ಮಲ್ಲ’ ಎಂದು ಪ್ರಿಯಾಂಕಾ ಅವರು ಹೇಳಿಕೊಂಡಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಅವರನ್ನು ವಿವಾಹ ಮಾಡಿಕೊಂಡ ಬಳಿಕ ಅವರು ಕೇವಲ ಪೋಷಕ ಪಾತ್ರಗಳಿಗೆ ಮಾತ್ರವೇ ಸೀಮಿತವಾಗಿದ್ದರು.
ದಕ್ಷಿಣ ಭಾರತದ ನಟಿಯರ ನಡುವೆ ಒಂದಷ್ಟು ವಿಭಿನ್ನ ಎಂದು ತೋರಿಸಿಕೊಂಡಿದ್ದರು. ಏಕೆಂದರೆ ಅವರು ಮದುವೆಯಾದ ನಂತರವೂ ಒಂದಷ್ಟು ಬಂಗಾಳಿ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡ ಸಿನಿಮಾಗಳಿಗೆ ಬ್ರೇಕ್ ನೀಡಿದ್ದರು. ಆದರೆ ಇಬ್ಬರು ಮಕ್ಕಳ ತಾಯಿಯಾದ ಸ್ವಲ್ಪ ಕಾಲ ತೆರೆಯಿಂದ ದೂರವಿದ್ದರು. ಆದರೆ ಪತ್ನಿಯಿಂದ ತಾಯಿ ಪಟ್ಟಕ್ಕೆ ಬಡ್ತಿ ಪಡೆದ ನಂತರವೂ ತೀರ ಇತ್ತೀಚೆಗೆ ತಮ್ಮ ಜನ್ಮದಿನದಂದು ಎರಡೆರಡು ಸಿನಿಮಾಗಳ ಟೈಟಲ್ ಘೋಷಣೆ ಮಾಡುವ ಮೂಲಕ ತಾವು ಇಂದಿಗೂ ಬಿಡುವಿರದ ನಟಿ ಎಂದು ಸಾಬೀತು ಮಾಡಿದ್ದಾರೆ.
ಅಷ್ಟೇ ಅಲ್ಲದೇ, ನಾಯಕಿ ಪ್ರಧಾನ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ವಿಶೇಷವೆಂದೇ ಹೇಳಬಹುದು. ಪ್ರಿಯಾಂಕ ಅವರ ತಾಯಿ ಬಂಗಾಳಿ ಚಿತ್ರನಟಿಯಾಗಿದ್ದವರು. ಹಾಗಾಗಿ ಮೊದಲಿನಿಂದಲೂ ನಟನೆಗೆ ಹೆಚ್ಚಿನ ಪ್ರಾಧಾನ್ಯತೆ ಇರುವ ಪಾತ್ರಗಳಲ್ಲೇ ನಟಿಸುತ್ತಾ ಬಂದರು. ಆದ್ದರಿಂದ ನಟಿಸಿದ ಎಲ್ಲಾ ಸಿನಿಮಾಗಳನ್ನು ನೆನಪಿಟ್ಟುಕೊಳ್ಳಲು ಪ್ರಯತ್ನಿಸುತ್ತೇನೆ ಎನ್ನುತ್ತಾರೆ. ‘ಸಾಥಿ’ ಚಿತ್ರದಲ್ಲಿ ಹೊಸ ನಾಯಕನನ್ನು ಪರಿಚಯ ಮಾಡಲಾಗಿತ್ತು. ಆ ಚಿತ್ರ ಎಷ್ಟು ದೊಡ್ಡ ಹಿಟ್ ಆಯಿತೆಂದರೆ ಆ ನಟ ಜೀತ್ ಈಗ ಅಲ್ಲಿ ದೊಡ್ಡ ಸ್ಟಾರ್ ಆಗಿ ಬೆಳೆದಿದ್ದಾನೆ. ನಾನು ಅದರ ಸೆಕೆಂಡ್ ಹಾಫ್ ನಲ್ಲಿ ಒಬ್ಬ ಅಂಧೆಯ ಪಾತ್ರ ಮಾಡಿದ್ದೆ. ಚಿತ್ರದ ಹಾಡುಗಳು ಇಂದಿಗೂ ಅಲ್ಲಿ ಜನಪ್ರಿಯ.
ಬಂಗಾಳಿ ಭಾಷೆಯಲ್ಲಿ ನನ್ನ ಕೆರಿಯರ್ ಬದಲಾಯಿಸಿದ ಚಿತ್ರ. ‘ಎಚ್ ಟು ಒ’ ಚಿತ್ರ ನನಗೆ ವೈಯಕ್ತಿಕವಾಗಿ ಹೆಚ್ಚು ಆತ್ಮೀಯವಾದ ಚಿತ್ರ. ಒಂದು ವರ್ಷ ಚಿತ್ರದ ಚಿತ್ರೀಕರಣ ನಡೆದಿತ್ತು. ಅದೇ ಚಿತ್ರದ ಮೂಲಕ ನನಗೆ ಉಪೇಂದ್ರ ಅವರು ಆತ್ಮೀಯರಾದರು. ಕನ್ನಡದಲ್ಲಿನ ನನ್ನ ವೃತ್ತಿ ಬದುಕಿನಲ್ಲಿ ಮೈಲಿಗಲ್ಲು ಹುಟ್ಟಿ ಹಾಕಿದ ಚಿತ್ರ ಮಲ್ಲ. ಈ ಸಿನಿಮಾದಲ್ಲಿ ತಾಯಿ, ವಿಲನ್, ಹೀಗೆ ಧನಾತ್ಮಕ ಮತ್ತು ಮೃದು ಸ್ವಭಾವ ಸೇರಿದಂತೆ ಎಲ್ಲಾ ರೀತಿಯ ಪಾತ್ರಗಳಲ್ಲಿ ನಟಿಸಿದ್ದೇನೆ. ಒಬ್ಬ ಕಲಾವಿದೆಯಾಗಿ ಅಷ್ಟೊಂದು ಶೇಡ್ಸ್ ಇರುವ ಪಾತ್ರ ಸಿಗುವುದು ಕಷ್ಟ. ಹಾಗಾಗಿ ನನಗೆ ತುಂಬಾ ಇಷ್ಟವಾದ ಸಿನಿಮಾಗಳಲ್ಲಿ ಮಲ್ಲ ಕೂಡ ಒಂದು ಎನ್ನುತ್ತಾರೆ ಪ್ರಿಯಾಂಕ ಉಪೇಂದ್ರ
ಚಿತ್ರೀಕರಣ ವಿಭಿನ್ನ ಅನುಭವ. ಒಂದಷ್ಟು ಸೆಟ್ಗಳಲ್ಲಿ ಮತ್ತು ಇನ್ನೊಂದಷ್ಟು ಔಟ್ಡೋರ್ ಲೊಕೇಶನ್ಗಳಲ್ಲಿ ಅವುಗಳ ಚಿತ್ರೀಕರಣ ಇತ್ತು. ಅದರಲ್ಲಿ ನನಗೆ ಹಾಕಿದ ಒಡವೆ ಬಟ್ಟೆಯೇ ಸುಮಾರು 25 ಕೆಜಿ ತೂಕ ಇತ್ತು. ಅದು ಕೈಗೆ ಟೈಟ್ ಆಗಿ ಚುಚ್ಚಿಕೊಂಡು ರಕ್ತ ಬಂದಿತ್ತು. ಕೊಚ್ಚೆ ನೀರಲ್ಲಿ ಇಳಿದು ನಡೆಸಿದ ಚಿತ್ರೀಕರಣದಲ್ಲೂ ರಕ್ತ ಒರೆಸಿಕೊಂಡು ಚಿತ್ರೀಕರಣ ನಡೆಸಿದ್ದೂ ಇದೆ. ಆದರೆ ಹಾಡಿನ ಜೊತೆಗೆ ಚಿತ್ರವೂ ಹಿಟ್ ಆಗಿದ್ದು ಮಾತ್ರ ಸುಳ್ಳಲ್ಲ ಎಂದು ಆ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.