Uncategorized

ಮಂಗಳವಾರ ಇದನ್ನು ಮನೆ ಬಾಗಿಲಿಗೆ ಕಟ್ಟಿ ಹಣ ತಾನಾಗಿ ಬರುತ್ತೆ

ನಮಸ್ಕಾರ ಸ್ನೇಹಿತರೇ, ಮಂಗಳವಾರ ಇದನ್ನು ಮನೆಯ ಮುಖ್ಯ ದ್ವಾರಕ್ಕೆ ಕಟ್ಟಿ ನಿಮ್ಮ ಜೀವನದಲ್ಲಿ ಚಮತ್ಕಾರವೆ ನಡೆಯುತ್ತದೆ ಎನ್ನುವ ಕುತೂಹಲಕಾರಿ ಮಾಹಿತಿಯನ್ನು ಈ ದಿನ ನಾವು ನಿಮಗೆ ತಿಳಿಸಿಕೊಡುತ್ತೇವೆ ವಾಸ್ತು ಶಾಸ್ತ್ರದ ಪ್ರಕಾರ ನಾಲ್ಕು ದಿಕ್ಕುಗಳನ್ನು ಶುಭ ಎಂದು ಭಾವಿಸಲಾಗಿದೆ .

ಹೀಗಾಗಿ ವಾಸ್ತು ಶಾಸ್ತ್ರಜ್ಞರ ಉಪಸ್ಥಿತಿಯಲ್ಲಿ ಮನೆಯ ಮುಖ್ಯ ದ್ವಾರವನ್ನು ನಿರ್ಮಿಸಬೇಕು ಆಗ್ನೇಯ ಹಾಗೂ ನೈರುತ್ಯ ದಿಕ್ಕಿನಲ್ಲಿ ಮನೆಯ ಪ್ರವೇಶ ದ್ವಾರ ಎಂದಿಗೂ ಇರಬಾರದು ಎಂಬುದನ್ನು ಮರೆಯಬೇಡಿ ಹೀಗೆ ಮಾಡಿದರೆ ಕಳ್ಳತನದ ಸಾಧ್ಯತೆ ಇದೆ ಆಗ್ನೇಯ ದಿಕ್ಕಿನ ಪ್ರವೇಶ ದ್ವಾರ ಇಡುವುದರಿಂದ ಕುಟುಂಬದಲ್ಲಿ ಜಗಳ ಉಂಟಾಗುತ್ತದೆ .

ಕುಟುಂಬದ ಸದಸ್ಯರು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಸಹ ಎದುರಿಸಬೇಕಾಗುತ್ತದೆ ಇದೆ ವೇಳೆ ನೈರುತ್ಯ ದಿಕ್ಕಿನ ಬಾಗಿಲಿನಿಂದಾಗಿ ಮನೆಯ ಮುಖ್ಯಸ್ಥರು ದುಃಖಗಳನ್ನು ಎದುರಿಸಬೇಕಾಗುತ್ತದೆ ಮನೆಯ ಮುಖ್ಯ ದ್ವಾರದ ಎದುರು ಭಾಗಕ್ಕೆ ತಗ್ಗು ಅಥವಾ ನೇರ ರಸ್ತೆ ಇರಬಾರದು ಮನೆಯ ಎದುರು ಭಾಗಕ್ಕೆ ಕಸದ ತೊಟ್ಟಿ ಅಥವಾ ಕಟ್ಟಡ ಇರಬಾರದು ಪ್ರವೇಶ ದ್ವಾರ ಸ್ವಚ್ಛ ಮತ್ತು ಆಕರ್ಷಕವಾಗಿರಬೇಕು ಮುಖ್ಯ ದ್ವಾರದಲ್ಲಿ ಕತ್ತಲೆ ಇರಬಾರದು .

ಮನೆಯ ಮುಖ್ಯ ಬಾಗಿಲಿನ ಎರಡು ಬದಿಗಳಲ್ಲಿ ಕೆಂಪು ಸ್ವಸ್ತಿಕ್ ಮತ್ತು ಮಧ್ಯದಲ್ಲಿ ನೀಲಿ ಸ್ವಸ್ತಿಕ್ ಅನ್ನು ಶುಭ ಎಂದು ಪರಿಗಣಿಸಲಾಗುತ್ತದೆ ಅಶೋಕ ಮಾವು ಅಥವಾ ಬೇವಿನ ಎಲೆಗಳ ಹಾರವನ್ನು ಮನೆಯ ಮುಖ್ಯ ಬಾಗಿಲಿನಲ್ಲಿ ಹಾಕುವುದು ತುಂಬಾನೇ ಶುಭ ಎಂದು ಪರಿಗಣಿಸಲಾಗುತ್ತದೆ ಮಾವಿನ ಎಲೆಗಳನ್ನು ಅತ್ಯುತ್ತಮ ಎಂದು ಪರಿಗಣಿಸಲಾಗಿದೆ ಕುದುರೆ ಲಾಳವನ್ನು

ಮುಖ್ಯದ್ವಾರದಲ್ಲಿ ಹೂಳಿ ಇದರಿಂದ ನಕಾರಾತ್ಮಕ ಶಕ್ತಿ ತಟಸ್ಥಗೊಳ್ಳುತ್ತದೆ ಮತ್ತು ಸಂತೋಷ ಹಾಗೂ ಶಾಂತಿ ಮನೆಯಲ್ಲಿ ನೆನೆಸುತ್ತದೆ ಇದಕ್ಕಾಗಿ ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ ತುಳಸಿ ಸಸ್ಯ, ತುಳಸಿ ಗಿಡವನ್ನು ಮುಖ್ಯ ಬಾಗಿಲಿನ ಮುಂದೆ ಅಥವಾ ಅಂಗಳದಲ್ಲಿ ಇಡಲಾಗುತ್ತದೆ ಮತ್ತು ತುಳಸಿ ಬಳಿ ದೀಪಾ ಪ್ರಜ್ವಲಿಸುವ ಮೂಲಕ ಮನೆಯಲ್ಲಿ ವಾಸ್ತುದೋಷವನ್ನು ನಿವಾರಿಸಬಹುದು ಮನೆಯ

ಮುಂಭಾಗದಲ್ಲಿ ದೇವತೆಯರು ನೆಲೆಸಿರುತ್ತಾರೆ ಎನ್ನುವ ನಂಬಿಕೆ ಇದೆ ಅದಕ್ಕಾಗಿ ನಿತ್ಯ ಬಾಗಿಲಿನ ಹೊಸ್ತಿಲನ್ನು ಸ್ವಚ್ಛ ಮಾಡಿ ರಂಗೋಲಿ ಹಾಕಿ ಅರಿಶಿಣ ಕುಂಕುಮ ಹಚ್ಚಿ ನಿತ್ಯ ಪೂಜಿಸುತ್ತಾರೆ ಇಂತಹ ಮನೆಯ ಮುಖ್ಯ ಬಾಗಿಲಿಗೆ ಲೋಳೆರಸ ಕಟ್ಟಿದರೆ ಅದೃಷ್ಟ ನಿಮ್ಮದಾಗುತ್ತದೆ ಈ ಲೋಳೆರಸದ ಗಿಡದಲ್ಲಿ ಸಾಕ್ಷಾತ್ ಶ್ರೀ ಮಹಾಲಕ್ಷ್ಮಿ ದೇವಿ ನೆಲೆಸಿರುತ್ತಾಳೆ ಎಂಬ ನಂಬಿಕೆ ಇದೆ ಲೋಳೆರಸದ ಒಂದು ಚಿಕ್ಕ ಗಿಡವನ್ನು ತೆಗೆದುಕೊಂಡು ಅದನ್ನು ಉಲ್ಟಾ ಅಂದರೆ

ಆ ಗಿಡದ ಬೇರನ್ನು ಮೇಲೆ ಮಾಡಿ ಉಳಿದ ಗಿಡವನ್ನು ಕೆಳಗೆ ಮಾಡಿ ಶುಭ ಮಂಗಳವಾರದ ದಿನ ಇದನ್ನು ಬಾಗಿಲಿಗೆ ಕಟ್ಟಬೇಕು ನಂತರ ಪ್ರತಿ ಮಂಗಳವಾರ ಹಾಗೂ ಅಮಾವಾಸ್ಯೆ ಹುಣ್ಣಿಮೆ ದಿನಗಳಲ್ಲಿ ಮರೆಯದೆ ಸೂರ್ಯೋದಯಕ್ಕೂ ಮುನ್ನ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ಮನೆಯನ್ನು ಸ್ವಚ್ಛ ಮಾಡಿ ಮಡಿವಂತಿಕೆಯಿಂದ ಗಿಡವನ್ನು ಪೂಜಿಸಬೇಕು ನಂತರ ನಾವು ಮನೆಯಿಂದ ಹೊರಗೆ

ಹೋಗುವಾಗ ಈ ಲೋಳೆ ರಸದ ಗಿಡವನ್ನು ನೋಡಿ ಹೋಗಬೇಕು ಹೀಗೆ ಮಾಡುವುದರಿಂದ ನಮ್ಮ ಕೆಲಸಗಳೆಲ್ಲವೂ ಸುಗಮವಾಗಿ ಆಗುತ್ತದೆ ಹಾಗೆ ಮನೆಯಲ್ಲಿರುವಂತಹ ಸಮಸ್ಯೆಗಳೆಲ್ಲವೂ ಕೂಡ ದೂರವಾಗುತ್ತದೆ ಇದರ ಜೊತೆಗೆ ಆರ್ಥಿಕ ಸಮಸ್ಯೆಗಳು ಕೂಡ ಬೇಗ ನಿವಾರಣೆ ಆಗುತ್ತದೆ ಇದರ ಜೊತೆಗೆ ನಮಗೆ ನಮ್ಮ ಮನೆಯ ಮೇಲೆ ಕೆಟ್ಟ ದೃಷ್ಟಿಗಳು ಬಿದ್ದಿದ್ದರೆ ಅದೆಲ್ಲವೂ ಕೂಡ ದೂರವಾಗುತ್ತವೆ .

ಹಳ್ಳಿಯಲ್ಲಿ ಸಿಗುವ ಅಕ್ಕಿ ಗೂಡನ್ನು ತೆಗೆದುಕೊಳ್ಳಬೇಕು ಮುಖ್ಯವಾಗಿ ಮಳೆಗಾಲ ಪ್ರಾರಂಭವಾಗದೆ ಇರುವಾಗಲೇ ಹಕ್ಕಿಗಳು ಗೂಡನ್ನು ಕಟ್ಟಿಕೊಳ್ಳುತ್ತವೆ ಇದರಲ್ಲಿ ಮೊಟ್ಟೆಗಳನ್ನು ಇಟ್ಟು ಅವು ದೊಡ್ಡದಾದ ಮೇಲೆ ಹೊರಟು ಹೋಗುತ್ತವೆ ಒಂದು ಸಾರಿ ಮೊಟ್ಟೆಗಳನ್ನು ಇಟ್ಟು ಮರಿ ಮಾಡಿ ಹೋದರೆ ಆನಂತರ ಆ ಗೂಡನ್ನು ಯಾವ ಪಕ್ಷಿಗಳು ಕೂಡ ಮತ್ತೆ ಬಳಸುವುದಿಲ್ಲ ಅಂತಹ ಹಕ್ಕಿಗೂಡನ್ನು

ತೆಗೆದುಕೊಳ್ಳಬೇಕು ಆದರೆ ಅಂಗಡಿಯಲ್ಲಿ ಸಿಗುವಂತಹ ಕೃತಕ ಪಕ್ಷಿಯ ಗೂಡನ್ನು ತಂದಿಡಬೇಡಿ ಇದರಿಂದ ಯಾವುದೇ ಫಲಿತಾಂಶ ಸಿಗುವುದಿಲ್ಲ ಪಕ್ಷಿಗಳು ಕಟ್ಟಿದ ಗೂಡನ್ನು ಮಾತ್ರ ಮನೆಯ ಮುಂದೆ ಕಟ್ಟಬೇಕು ಇದನ್ನು ಮನೆಗೆ ತಂದು ಅರಿಶಿಣದ ನೀರಿನಿಂದ ಪ್ರೋಕ್ಷಣೆ ಮಾಡಬೇಕು.

Leave a Reply

Your email address will not be published. Required fields are marked *

Back to top button