ENTERTAINMENT

ಯಾವ ಕಾರ್ಯಕ್ರಮಕ್ಕೂ ರವಿಚಂದ್ರನ್ ಹೆಂಡತಿ ಜೊತೆ ಬರಲಾ ಯಾಕೆ ಗೊತ್ತಾ…ಅಸಲಿ ಕಾರಣ

ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಎಂದರೆ ಮೊದಲು ನೆನಪಾಗುವುದು ಪ್ರೇಮ ಲೋಕ. ಇವರ ಸಿನಿಮಾಗಳಲ್ಲಿನ ಹಾಡುಗಳೆ ಇರಲಿ, ಏನೇ ಇದ್ದರೂ ಅದರಲ್ಲಿ ಏನಾದರೂ ಒಂದು ವಿಶೇಷತೆ ಇದ್ದೆ ಇರುತ್ತದೆ. ಅಂದಹಾಗೆ, ಪ್ರೇಮಲೋಕದ ದೊರೆ ಎಂದೇ ಕರೆಯುವ ಇವರಿಗೆ ಸಾಕಷ್ಟು ಅಭಿಮಾನಿ ಬಳಗವೇ ಇದೆ ಎಂದರೆ ತಪ್ಪಾಗಲಾರದು. ಹೌದು, ಇನ್ನು ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳಿಗೆ ಹೇಗೆ ಹಣವನ್ನು ಖರ್ಚು ಮಾಡುವುದು ಅಂತ ಹೇಳಿಕೊಟ್ಟವರೇ ಈ ಕ್ರೇಜಿಸ್ಟಾರ್ ರವಿಚಂದ್ರನ್. ಸಿನಿಮಾಗೆ ಹಾಕಿದ ಬಂಡವಾಳವನ್ನು ಹೇಗೆ ಮರುಗಳಿಸುವುದು ಎಂಬುದು ಆ ಕಾಲಕ್ಕೆ ಇವರಿಗೆ ಚೆನ್ನಾಗಿಯೇ ಗೊತ್ತಿತ್ತು.1987, ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್ ರಂತಹ ದಿಗ್ಗಜರು ಕನ್ನಡ ಸಿನಿಮಾ ರಂಗದಲ್ಲಿ ಸ್ಟಾರ್ ನಟರಾಗಿ ಮಿಂಚುತ್ತಿದ್ದ ಕಾಲವದು.

ನಡುವೆಯೂ ಕನ್ನಡ ಸಿನಿಮಾಗಳು ಅಷ್ಟು ಪರಿಚಯವಿಲ್ಲದಿದ್ದರು, ಲವ್ ಸ್ಟೋರಿಯ ಸಿನಿಮಾದ ಮೂಲಕ ಸಿನಿ ರಂಗದಲ್ಲಿ ಬದುಕು ಕಟ್ಟಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಆ ವೇಳೆಯಲ್ಲೇ ಧೈರ್ಯ ಮಾಡಿ ಮುಂದೆ ಬಂದವರು ಕ್ರೇಜಿ ಸ್ಟಾರ್ ರವಿಚಂದ್ರನ್. ಕ್ರೇಜಿಸ್ಟಾರ್ ಕೇವಲ ನಟ ಮಾತ್ರವಲ್ಲ ಒಂದೊಳ್ಳೆ ನಿರ್ದೇಶಕ ಎಂಬುದನ್ನು ಸಾಭಿತು ಮಾಡಿದ್ದಾರೆ. ಇಡೀ ಚಿತ್ರರಂಗ ಹಿಂದೆ ತಿರುಗಿ ನೋಡುವಂತೆ ಮಾಡಿದವರು ಈ ಕ್ರೇಜಿ ಸ್ಟಾರ್ ರವಿಚಂದ್ರನ್. ಪ್ರೇಮಕಥೆಗಳನ್ನು ಹೀಗೂ ಕೂಡ ತೆರೆ ಮೇಲೆ ತರಬಹುದು ಎಂದು ತೋರಿಸಿ ಕೊಟ್ಟಿದ್ದಾರೆ.ಅಂದಹಾಗೆ,ಇವರ ತಂದೆ ಖ್ಯಾತ ನಿರ್ಮಾಪಕ ವೀರಾಸ್ವಾಮಿಯವರು ಸ್ಥಾಪಿಸಿದ ಈಶ್ವರಿ ಸಂಸ್ಥೆಯ ಮೂಲಕ ಹಲವು ಚಿತ್ರಗಳನ್ನು ನಿರ್ಮಿಸಿದ್ದರು.

ಮಾತ್ರವಲ್ಲದೇ,ರವಿಚಂದ್ರನ್ ನಟಿಸಿ, ನಿರ್ಮಿಸಿರುವ ಸಿಪಾಯಿ ಚಿತ್ರದ ವೇಳೆಯಲ್ಲಿ ಈ ಸಂಸ್ಥೆ ಬೆಳ್ಳಿ ಹಬ್ಬವನ್ನು ಆಚರಿಸಿಕೊಂಡರು. ಇನ್ನು ಇವರಿಗೆ ತಾಂತ್ರಿಕತೆಯ ಪರಿಪೂರ್ಣ ಜ್ಞಾನ ಹಾಗೂ ತಂತ್ರಜ್ಞಾನದ ವಿನೂತನ ರೀತಿಯ ಪ್ರಯೋಗವನ್ನು ಇವರ ನಿರ್ದೇಶನ ಸಿನಿಮಾಗಳಲ್ಲಿ ಕಾಣಬಹುದು.ಇನ್ನು ಇವರ ಸಿನಿಮಾದ ಪ್ರತಿಯೊಂದು ಚಿತ್ರದಲ್ಲಿ ಸಂಗೀತ ಹೊಸತನದಿಂದ ಕೂಡಿರುತ್ತದೆ.ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ಚಿತ್ರರಂಗಕ್ಕೆ ಕೊಟ್ಟಿರುವ ಖ್ಯಾತಿ ಇವರಿಗಿದೆ.

ಇದಕ್ಕೆ ಪತ್ರಿಯಾಗಿ, ರವಿಚಂದ್ರನ್ ಅವರು “ನಾನು ಆಚೆಕಡೆ ಬಂದಾಗ ನನ್ನ ಅಭಿಮಾನಿಗಳೆಲ್ಲಾ ಸಾಮಾನ್ಯವಾಗಿ ನನ್ನನ್ನು ಸುತ್ತಮುತ್ತುತ್ತಾರೆ. ಆಗ ಸಾಕಷ್ಟು ಗದ್ದಲ ವಾತಾವರಣ ಉಂಟಾಗಿರುತ್ತದೆ. ಅಂತಹ ಸಮಯದಲ್ಲಿ ನಾನು ನನ್ನ ಹೆಂಡತಿಯ ಕಡೆ ಹೆಚ್ಚು ಗಮನ ಕೊಡಲು ಆಗುವುದಿಲ್ಲ ಅಲ್ಲದೇ ಆಕೆಗೂ ಕೂಡ ಗಜಿಬಿಜಿಯ ವಾತಾವರಣ ಎಂದರೆ ಇಷ್ಟವಾಗುವುದಿಲ್ಲ” ಎಂದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹೊಸತನವನ್ನು ತಂದ ನಟ ರವಿಚಂದ್ರನ್ ಅವರು ಇನ್ನಷ್ಟು ಸಿನಿಮಾಗಳನ್ನು ನೀಡುವಂತಾಗಲಿ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

Related Articles

Leave a Reply

Your email address will not be published. Required fields are marked *

Back to top button