ಸುದ್ದಿ

ಯುವಕರ/ಪುರುಷರ ಕಾಮೋ *ದ್ದೀಪಕ ಗುಣವುಳ್ಳ ಈ ಬೇರು ಅನೇಕ ಸಮಸ್ಯೆಗೆ ರಾಮಬಾಣ,ಹೇಗೆ ನೋಡಿ‌…

ಅಶ್ವಗಂಧದಲ್ಲಿ ಹಲವಾರು ಆರೋಗ್ಯಕರ ಗುಣಗಳ ಜೊತೆಗೇ ಸೌಂದರ್ಯವರ್ಧಕ ಗುಣಗಳೂ ಇವೆ. ಯಾವುದಕ್ಕೆಲ್ಲಾ ಉತ್ತಮ ಎಂಬುದನ್ನು ಲೇಖನದಲ್ಲಿ ವಿವರಿಸಲಾಗಿದೆ.

ಅಶ್ವಗಂಧ ಒಂದು ಅದ್ಭುತ ಮೂಲಿಕೆಯಾಗಿದ್ದು ಭಾರತದ ಜಿನ್ಸೆಂಗ್ ಎಂಬ ಅನ್ವರ್ಥನಾಮವನ್ನೂ ಪಡೆದಿದೆ. ಈ ಅದ್ಭುತ ಮೂಲಿಕೆಗೆ ಕೊಂಚ ಭಿನ್ನವಾದ ಹೆಸರು ಬರಲು ಇದರ ವಾಸನೆಯೇ ಕಾರಣ. ಇದರ ವಾಸನೆ ಕುದುರೆಯ ಮೂತ್ರದ ವಾಸನೆಯನ್ನೇ ಹೋಲುವ ಕಾರಣ ಆಯುರ್ವೇದ ಇದಕ್ಕೆ ಅಶ್ವದ ಗಂಧ ಅಥವಾ ಅಶ್ವಗಂಧ ಎಂಬ ಹೆಸರನ್ನು ನೀಡಿದೆ. ಈ ಮೂಲಿಕೆ ಆರೋಗ್ಯವನ್ನು ವೃದ್ದಿಸುವ ಜೊತೆಗೇ ತಾರುಣ್ಯವನ್ನೂ ಕಾಪಾಡುತ್ತದೆ. ಇಂದಿನ ಲೇಖನದಲ್ಲಿ ಅಶ್ವಗಂಧ ಯಾವುದಕ್ಕೆಲ್ಲಾ ಉತ್ತಮ ಮದ್ದಿನ ರೂಪದಲ್ಲಿ ಪ್ರಯೋಜನಕಾರಿಯಾಗಿದೆ ಎಂಬುದನ್ನು ವಿವರಿಸಲಾಗಿದೆ.

ಕಾಮೋದ್ದೀಪಕ ಗುಣವುಳ್ಳ ಅಶ್ವಗಂಧದ ಪುಡಿಯನ್ನು ಲೈಂ *ಗಿಕ ದೌರ್ಬಲ್ಯ ನಿವಾರಿಸುವ ಎಲ್ಲ ಔಷಧಿಗಳಲ್ಲಿ ಬಳಸುತ್ತಾರೆ. ಅಶ್ವಗಂಧ ಕಫ ನಿವಾರಕ, ಶ್ವೇತ ಕುಷ್ಠ ನಿವಾರಕ, ಕ್ಷಯರೋಗ ನಿವಾರಕ ಮತ್ತು ವಾಯು ವಿಕಾರಗಳನ್ನು ಗುಣಪಡಿಸುವ ಔಷಧಿಯಾಗಿದೆ. ಧಾ ತು ದೌರ್ಬಲ್ಯ, ಯೋ *ನಿ ಶೂಲ, ಕೈಕಾಲುಗಳಲ್ಲಿನ ಸೆಳೆತ, ಆಮವಾತ, ಜ್ವರ, ದಾಹ, ಕೀಲುನೋವು, ಶ್ವಾಸರೋಗ, ಗರ್ಭಾ *ಶಯ ದೌರ್ಬಲ್ಯ, ತಲೆನೋವು, ನಿದ್ರಾಹೀನತೆ, ಆಯಾಸ, ವೃದ್ಧಾಪ್ಯದ ದೌರ್ಬಲ್ಯ,

ರೋಗ ಗುಣಮುಖವಾದ ನಂತರ ಬರುವ ದೌ *ರ್ಬಲ್ಯ ಇತ್ಯಾದಿಗಳನ್ನು ಪರಿಣಾಮಕಾರಿಯಾಗಿ ಗುಣಪಡಿಸುತ್ತದೆ ಎಂದು ಆಯುರ್ವೇದ ತಿಳಿಸುತ್ತದೆ. ಅಶ್ವಗಂಧ ನಮಗೆ ಪುಡಿ ಮತ್ತು ಬೇರು ಎರಡು ರೂಪದಲ್ಲೂ ದೊರೆಯುತ್ತದೆ. ಬೇರಿನ ರೂಪದ ಅಶ್ವಗಂಧಕ್ಕೆ ಬೆಲೆ ಕಡಿಮೆ. ಅದನ್ನು ಮನೆಯಲ್ಲಿ ಕುಟ್ಟಿ ಪುಡಿ ಮಾಡಿ ಬಟ್ಟೆಯಿಂದ ಸೋಸಿದಾಗ ನುಣುಪಾದ ಪುಡಿ ದೊರಕುತ್ತದೆ. ಅದನ್ನು ಒಂದು ಡಬ್ಬಿಯಲ್ಲಿ ಹಾಕಿಟ್ಟುಕೊಂಡು ನಿಯಮಿತವಾಗಿ ಸೇವಿಸಬೇಕು.

ಸೇವಿಸುವ ವಿಧಾನ: ಅಶ್ವಗಂಧದ

ಪುಡಿಯನ್ನು ಹಾಲು ಮತ್ತು ಜೇನುತುಪ್ಪದೊಂದಿಗೆ ಎರಡು ವಿಧದಲ್ಲಿ ಸೇವಿಸಬಹುದು. ಹಾಲಿನೊಂದಿಗೆ ಸೇವಿಸಬೇಕಾದರೆ ಹಾಲಿಗೆ ಕಲ್ಲು ಸಕ್ಕರೆಯನ್ನು ಬೆರೆಸಿ ಮುಂಜಾನೆ ಹಾಗೂ ರಾತ್ರಿ ಒಂದೊಂದು ಚಮಚೆಯನ್ನು ಸೇವಿಸಬೇಕು. ಅಶ್ವಗಂಧ, ಜಟಾಮಾಸಿ, ಬ್ರಾಹ್ಮಿ ಮೂರನ್ನೂ ಸಮಪ್ರಮಾಣದಲ್ಲಿ ಮಿಶ್ರ ಮಾಡಿ, ಒಂದರಿಂದ ಮೂರು ಗ್ರಾಂವರೆಗೆ ಜೇನುತುಪ್ಪದೊಂದಿಗೆ ಸೇವಿಸಿದರೆ ಅಧಿಕ ರಕ್ತದೊತ್ತಡ ಗುಣವಾಗುತ್ತದೆ. ಅಶ್ವಗಂಧದಿಂದ ಹಲವು ಔಷಧಗಳನ್ನು ತಯಾರಿಸುತ್ತಾರೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

Related Articles

Leave a Reply

Your email address will not be published. Required fields are marked *

Back to top button