ಹಾವು ಕಚ್ಚಿದರೆ ತಕ್ಷಣಕ್ಕೆ ಏನ್ ಮಾಡಬೇಕು? ಪ್ರಥಮ ಚಿಕಿತ್ಸೆ ಏನು?
ಹಾವುಗಳನ್ನು ನೋಡಿದರೆ ಭಯ ಪಡದೇ ಇರುವಂತಹವರು ತುಂಬಾ ಕಡಿಮೆ. ಹಾವುಗಳ ಲೋಕವನ್ನು ತಿಳಿದುಕೊಂಡಿರುವವರಿಗೆ ಇದರಿಂದ ಭಯವಾಗದೆ ಇದ್ದರೂ ಕೆಲವೊಂದು ಸಲ ಹಾವು ಕಡಿತದಿಂದಾಗಿ ತುಂಬಾ ನೋವು, ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಇದರಿಂದ ಕಡಿದಿರುವಂತಹ ಹಾವು ವಿಷಕಾರಿಯೇ ಅಥವಾ ನಿರ್ವಿಷವಾಗಿರುವುದೇ ಎಂದು ತಿಳಿಯುವುದು ಅತೀ ಅಗತ್ಯ. ಇದನ್ನು ತಿಳಿದುಕೊಂಡರೆ ಆಗ ಹಾವು ಕಡಿತದಿಂದಾಗಿ ಉಂಟಾಗುವಂತಹ ಪ್ರಾಣಹಾನಿಯನ್ನು ಒಂದು ಹಂತದಲ್ಲಿ ತಪ್ಪಿಸಬಹುದಾಗಿದೆ.
ವಿಷಕಾರಿ ಹಾವು ಕಡಿದಾಗ ಯಾವುದೇ ರೀತಿಯ ವಿಷವನ್ನು ಹೊರಹಾಕದೆ ಇದ್ದರೆ ಇದನ್ನು ಒಣ ಕಡಿತವೆಂದು ಕರೆಯಲಾಗುವುದು. ಹಾವುಗಳ ಜಾತಿಗೆ ಅನುಗುಣವಾಗಿ ಒಣ ಕಡಿತದ ಪರಿಣಾಮವು ಅವಲಂಬಿಸಿರುವುದು. ಹಲ್ಲಿನ ಗುರುರುತಗಳು ಮತ್ತು ವಿಷದ ಹಲ್ಲುಗಳಿಂದ ಇದನ್ನು ಗುರುತಿಸಲಾಗುವುದು. ಆದರೆ ಯಾವುದೇ ವಿಷವು ಇದರಲ್ಲಿ ಇರಲ್ಲ. ಅದಾಗ್ಯೂ, ಹಾನಿಕಾರವಲ್ಲದ ಹಾವು ಕಡಿದಿದೆಯಾ ಎಂದು ತಿಳಿಯಬೇಕು. ಹಾವು ಕಡಿತದಿಂದಾಗಿ ಸೋಂಕು
ಹಾವು ಕಡಿದಾಗ ಅದು ವಿಷವನ್ನು ಹೊರಹಾಕಿದರೆ, ಇದು ವಿಷಪೂರಿತ ಕಡಿತವೆಂದು ಹೇಳಲಾಗುತ್ತದೆ. ಇದು ನೋವು ಉಂಟು ಮಾಡಿ, ಬಳಿಕ ಊತ ಕಾಣಿಸಿಕೊಳ್ಳುವುದು. ವಿಷಪೂರಿತ ಕಡಿತಕ್ಕೆ ಚಿಕಿತ್ಸೆ ನೀಡದೆ ಇದ್ದರೆ ಲಕ್ಷಣಗಳು ಮತ್ತಷ್ಟು ಹದಗೆಡಬಹುದು. ಇದರಲ್ಲಿನ ಕೆಲವೊಂದು ಲಕ್ಷಣಗಳಲ್ಲಿ ವಾಕರಿಕೆ, ಸೆಳೆತ ಮತ್ತು ಪಾರ್ಶ್ವವಾಯು ಉಂಟಾಗಬಹುದು. ಯಾವ ಜಾತಿಯ ಹಾವು ಕಡಿದಿದೆ ಎನ್ನುವ ಮೇಲೆ ಹಾವಿನ ಕಡಿತದ ಲಕ್ಷಣಗಳು ಅವಲಂಬಿಸಿದೆ.
ಹಾವು ಕಚ್ಚಿದ ಸಂದರ್ಭದಲ್ಲಿ ಮೊದಲು ಮಾಡುವ ಕೆಲಸ ಹಾವು ಕಚ್ಚಿದ ಸಂದರ್ಭದಲ್ಲಿ ಕಚ್ಚಿದ ಜಾಗಕ್ಕೆ ಯಾವುದಾದರೂ ಚಾಕುವಿಂದ ಸ್ವಲ್ಪ ಗಾಯವನ್ನು ದೊಡ್ಡದು ಮಾಡಿ ವಿಷವನ್ನು ಹೊಂದಿರುವ ರಕ್ತವನ್ನು ಹೊರಹಾಕಬೇಕು. ಇದರ ಬಳಿಕ ಪೊಟಾಶಿಯಂ ಪಾರಾಗ್ನೆಟ್ ಹುಡಿಯನ್ನು ಹಾಕಿಕೊಳ್ಳಿ. ಹಿಂದಿನ ಕಾಲದಲ್ಲಿ ಹಾವು ಕಚ್ಚಿದಾಗ ಗಾಯಕ್ಕೆ ಬಾಯಿ ಹಾಕಿ ವಿಷವನ್ನು ಹೀರಿ ತೆಗೆಯಲಾಗುತ್ತಾ ಇತ್ತು. ಆದರೆ ವಿಷ ಹೀರುವವರಿಗೆ ಇದು ಅಪಾಯಕಾರಿ. ಬೆಟ್ಟ ಪ್ರದೇಶದಲ್ಲಿರುವ ಕೆಲವು ತಜ್ಞರು ಈಗಲೂ ಇದೇ ತಂತ್ರವನ್ನು ಅನುಸರಿಸುತ್ತಾರೆ.
ಹಾಗಾಗಿ ಯಾವುದೇ ಕಾರಣಕ್ಕೂ ನಾವು ಹಾವು ಕಚ್ಚಿದ ಸಂದರ್ಭದಲ್ಲಿ ನಮ್ಮ ದೇಹದಲ್ಲಿ ವೇಗವಾಗಿ ರಕ್ತ ಹರಿಯಲು ಅನುವು ಮಾಡಿಕೊಡಬಾರದು. ಈ ಸಮಯದಲ್ಲಿ ನಿಮ್ಮನ್ನು ನೀವು ಸಮಾಧಾನ ಪಡಿಸಿಕೊಳ್ಳಲು ದೀರ್ಘವಾದ ಉಸಿರಾಟ ನಡೆಸಿ
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.