ಬಿಗ್ಬಾಸ್ ಅರವಿಂದ್ ಕೆಪಿ ಅವರ ಮನೆ ನಿಜಕ್ಕೂ ಹೇಗಿದೆ ಗೊತ್ತಾ…ನೋಡಿ ಮೊದಲಸಲ
ಕನ್ನಡ ಕಿರುತೆರೆಯಲ್ಲಿ ಅತಿಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಕಾರ್ಯಕ್ರಮಗಳಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಕೂಡ ಒಂದಾಗಿದ್ದು ಈಗಾಗಲೇ ಬಿಗ್ ಬಾಸ್ ಸೀಸನ್ 8 ಕೂಡ ಮುಗಿದು ಹೋಗಿದ್ದು ಈ ಬಾರಿಯ ಬಿಗ್ ಬಾಸ್ ಬಹಳ ವಿಶೇಷವಾಗಿತ್ತು. ಇನ್ನು ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಯಾಗಿ ಹೋಗುವ ಅವಕಾಶ ಎಲ್ಲ ಸೆಲೆಬ್ರಿಟಿಗಳಿಗೂ ಕೂಡ ದೊರೆಯುವುದಿಲ್ಲ. ಅಂತೆಯೇ ಮನೆಯೋಳೆಗೆ ಹೋದ ಸೆಲೆಬ್ರಿಟಿಗಳಲ್ಲಿ ಕ್ರೀಡಾ ಪಟು ಕೋಟದಲ್ಲಿ ಹೋಗಿದ್ದ ಬೈಕ್ ರೇಸರ್ ಅರವಿಂದ್ ಕೆಪಿ ಅವರು ಅಪಾರ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದು ಇದೀಗ ಸೆಲೆಬ್ರಿಟಿಯಾಗಿದ್ದಾರೆ.
ಮೂಲತಃ ಉಡುಪಿ ಜಿಲ್ಲೆಯ ಮಣಿಪಾಲ್ ನವರಾದ ಅರವಿಂದ್ ವೃತ್ತಿಯಲ್ಲಿ ಬೈಕ್ ರೇಸರ್ ಆಗಿದ್ದು ತಂದೆ ಪ್ರಭಾಕರ್ ರವರುವ ಉಪಾಧ್ಯರಾಗಿದ್ದಾರೆ ತಾಯಿ ಉಷಾ ಅವರು ಕೂಡ ಉಪಾಧ್ಯರಾಗಿದ್ದಾರೆ.ಅರವಿಂದ್ ಅವರ ಬಳಿ ಹಲವಾರು ಬಗೆದ ವಿಧವಿಧವಾದ ಅತ್ಯುತ್ತಮ ಬೈಕ್ ಕಲೆಕ್ಷನ್ ಗಳಿದ್ದು 2004 ರಿಂದಲೂ ಕೂಡ ಬೈಕ್ ರೇಸರ್ ಆಗಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ರಾಲಿ ಮತ್ತು ರೇಸ್ ಗಳಲ್ಲಿ ಭಾಗವಹಿಸಿರುವ ಇವರು ಅನೇಕ ಪ್ರಶಸ್ತಿಗಳನ್ನು ಕೂಡ ಮುಡಿಗೇರಿಸಿಕೊಂಡಿದ್ದಾರೆ. ಅತ್ಯಂತ ಕಠಿಣವಾದ ಡಕರ್ ರಾಲಿಯಲ್ಲಿ ಭಾಗವಹಿಸಿದ್ದರು ಅರವಿಂದ್.ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
2012 ರಲ್ಲಿ ಸಂಭವಿಸಿದ ಅವಘಡದಲ್ಲಿ ಹಾಸಿಗೆ ಹಿಡಿಯುವ ಪರಿಸ್ಥಿತಿ ಕೂಡ ತಲುಪಿದ್ದರು. ತದನಂತರ 2013 ರಲ್ಲಿ ಮತ್ತೊಮ್ಮೆ ಚಾಂಪಿಯನ್ ಆಗುತ್ತಾರೆ. ಇನ್ನು ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದ ಸಮಯದಲ್ಲಿಯೇ ಅರವಿಂದ್ ಅವರಿಗೆ ಮೋಟಾರ್ ಸೈಕಲ್ ರೇಸರ್ ಆಗಬೇಕು ಎಂಬ ಆಸೆ ಚಿಗುರೊಡೆಯುತ್ತದೆ. ಆ ಸಮಯದಲ್ಲಿ ಮಂಗಳೂರು ಚಿಕ್ಕಮಗಳೂರಿನ ಆಸುಪಾಸಿನಲ್ಲಿ ನಡೆಯುತ್ತಿದ್ದ ಬೈಕ್ ರೇಸ್ಗೆ ತೆರಳಿ ಪ್ರಶಸ್ತಿ ಪಡೆಯುತ್ತಾ ಬರುತ್ತಾರೆ.ಹೀಗೆ ಕಠಿಣ ಪರಿಶ್ರಮದಿಂದ ದರ್ಟ್ ಟ್ರಾಕ್ ರ್ಯಾಲಿ ಮತ್ತು ಮೋಟೊಕ್ರಾಸ್ನಲ್ಲಿ ಸುಮಾರು 15 ಬಾರಿ ನ್ಯಾಷನಲ್ ಚಾಂಪಿಯನ್ ಆದ ಇವರು 2009ರಲ್ಲಿ ಎಮ್ಆರ್ಎಫ್ ಸೂಪರ್ಕ್ರಾಸ್ ನ್ಯಾಚನಲ್ ಚಾಂಪಿಯನ್ ತನ್ನದಾಗಿಸಿಕೊಂಡರು. 2019ರಲ್ಲಿ ಎರಡನೇ ಬಾರಿಗೆ ಅರವಿಂದ್ ಡಕಾರ್ ರ್ಯಾಲಿ ಪೂರ್ತಿ ಮಾಡುತ್ತಾರೆ. ಈ ರ್ಯಾಲಿ ಪೆರುವಿನಲ್ಲಿ ನಡೆಯಿತು. 39ನೇ ಸ್ಥಾನವನ್ನು ಪಡೆಯುತ್ತಾರೆ.
ಭಾರತೀಯರಾದ ಸಿ.ಎಸ್ ಸಂತೋಷ್ ಎಂಬವರು ಡಕಾರ್ ರ್ಯಾಲಿಯನ್ನು ಮೊದಲು ಪೂರ್ತಿ ಮಾಡಿದ್ದಾರೆ. ಇವರು 2015ರಲ್ಲಿ 26ನೇ ಸ್ಥಾನ ಪಡೆದಿದ್ದರು. ಬೆಂಗಳೂರು ಡೇಸ್ ಎಂಬ ಸಿನಿಮಾದಲ್ಲಿ ಬೈಕ್ ಸ್ಟಂಟರ್ ಆಗಿ ಅರವಿಂದ್ ಕಾಣಿಸಿಕೊಂಡಿದ್ದು, ಸದ್ಯ ಅರವಿಂದ್ ಟಿವಿಎಸ್ ಕಂಪೆನಿ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ.ಇನ್ನು ಬಿಗ್ ಬಾಸ್ ಕಾರ್ಯಕ್ರಮದ ಪ್ರತಿಯೊಂದು ಸೀಸನ್ನಲ್ಲಿ ಒಂದೊಂದು ಜೋಡಿಗಳು ಪ್ರೇಕ್ಷಕರ ಮನಸ್ಸಿನ ಗೆಲ್ಲುವಲ್ಲಿ ಯಶಸ್ವಿಯಾಗುತ್ತವೆ.
ಈ ಹಿಂದೆ ರಾಪರ್ ಚಂದನ್ ಶೆಟ್ಟಿ ನಿವೇದಿತಾ ಗೌಡ ಒಂದೇ ಸೀಸನ್ನಲ್ಲಿ ಭಾಗವಹಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು ಹಾಗೆಯೇ ಕನ್ನಡ ಬಿಗ್ ಬಾಸ್ ಸೀಸನ್ ಎಂಟರಲ್ಲಿ ಕ್ಯೂಟಸ್ಟ್ ಜೋಡಿ ಎಂದೇ ಕರೆಸಿಕೊಳ್ಳುತ್ತಿದ್ದಂತಹ ಅರವಿಂದ್ ಕೆಪಿ ಹಾಗೂ ದಿವ್ಯಾ ಹುಡುಗ ಕೂಡ ಅಭಿಮಾನಿಗಳ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದು ತಮ್ಮ ಮುದ್ದು ಮುದ್ದು ಮಾತುಗಳಿಂದ ತರಲೆ ತಮಾಷೆಗಳಿಂದ ಇವರಿಬ್ಬರು ನಿಜವಾಗಿಯೂ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವಂತೆ ದೊಡ್ಮನೆಯಲ್ಲಿ 120 ದಿನದವರೆಗೂ ಅನ್ಯೋನ್ಯವಾಗಿದ್ದರು.
ಹೀಗೆ ಸ್ವಲ್ಪ ಲವ್ ಸ್ಟೋರಿ ಮತ್ತು ಸ್ವಲ್ಪ ಸ್ಟ್ರಾಂಗ್ ಟಾಸ್ಕ್ಗಳ ಮೂಲಕ ಫೇಮಸ್ಸದಂತಹ ಅರವಿಂದ್ ಅವರ ಮನೆ ಹೇಗಿದೆ ಎಂದರೆ ಅವರ ಮನೆ ಕಡಿಯಲಿ ದೇವಸ್ಥಾನದ ವಠಾರದಲ್ಲಿದೆ. ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ಅರವಿಂದ್ ತಮ್ಮ ವೃತ್ತಿಜೀವನದಲ್ಲಿ ಸಂಪಾದಿಸಿರುವಂತಹ ನೂರಾರು ಪ್ಲೇಸ್ಗಳು ಮೆಡಲ್ ಶೀಲ್ಡ್ ಗಳು ಕಾಣಸಿಗುತ್ತದೆ. ಅಲ್ಲದೆ ತಮ್ಮ ಪ್ರೀತಿಯ ಬೈಕ್ಗಳನ್ನು ಕೂಡ ಅರವಿಂದ್ ಮನೆಯ ಒಳಗಡೆಯೇ ಪಾರ್ಕ್ ಮಾಡಿಕೊಂಡಿದ್ದಾರೆ.
ಇನ್ನು ಅರವಿಂದ್ ಅವರ ಮನೆಯಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚಿನ ರೇಸ್ನಲ್ಲಿ ಭಾಗವಹಿಸಿ ಗೆದ್ದಂತಹ ಶಿಲ್ಡಗಳನ್ನು ಕಾಣಬಹುದು. ಜೊತೆಗೆ ತನ್ನ ತಂದೆ ಮೊದಲ ಬಾರಿಗೆ ಪಿಯುಸಿಯಲ್ಲಿ ಹೆಚ್ಚಿನ ಅಂತ ತೆಗೆದ ಕಾರಣಕ್ಕೆ ಕೊಡಿಸಿದಂತಹ ಯಮಹಾ ಬೈಕ್ ಕೂಡ ಅರವಿಂದ್ ಅವರು ತಮ್ಮ ಪ್ರೀತಿಯ ಬೈಕ್ ಎಂಬ ಕಾರಣಕ್ಕೆ ತಮ್ಮ ಮನೆಯಲ್ಲೇ ಇಟ್ಟುಕೊಂಡಿದ್ದಾರೆ. ಇನ್ನು ಅರವಿಂದ ಮುಂದಿನ ದಿನಗಳಲ್ಲಿ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಕೊಡುತ್ತಾರಾ ಅಥವಾ ತಮ್ಮ ರೇಸಿಂಗ್ ಫೀಲ್ಡ್ನಲ್ಲಿ ಮುನ್ನುಗ್ಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.