ಮಗನ ಬಗ್ಗೆ ಮನಬಿಚ್ಚಿ ಮಾತನಾಡಿದ ನಿಖಿಲ್.. ಹೇಗಿದ್ದಾನೆ ಗೊತ್ತಾ ರೇವತಿ ನಿಖಿಲ್ ಪುತ್ರ.
ಹೌದು ಮೊದಲು ಮಗನ ಬಗ್ಗೆ ಮಾತನಾಡಿದ ನಿಖಿಲ್ “ಮೊದಲನೆಯದಾಗಿ ಮಗ ಬಹಳ ಚೆನ್ನಾಗಿದ್ದಾನೆ.. ಆದರೆ ಅವನು ಯಾರ ತರ ಇದ್ದಾನೆ ಅಂತ ಗೊತ್ತಿಲ್ಲ.. ಮಕ್ಕಳು ಬೆಳಿತಾ ಬೆಳಿತಾ ಬದಲಾಗ್ತಾ ಇರ್ತಾರೆ.. ಜೊತೆಗೆ ನಾವು ದಿನ ಪೂರ್ತಿ ನೋಡ್ತಿರ್ತಿವಿ ಅದರಿಂದ ನಮಗೆ ಗೊತ್ತಾಗಲ್ಲ..
ಆದರೆ ಮನೆಗೆ ಯಾರಾದರೂ ಸಂಬಂಧಿಕರು ಬಂದಾಗ ಹೇಳ್ತಾರೆ.. ಆದರೆ ಮಕ್ಕಳು ಬದಲಾಗ್ತಿರ್ತಾರಲ್ಲಾ ಅದರಿಂದ ಗೊತ್ತಿಲ್ಲ ಸಧ್ಯಕ್ಕೆ.. ಮೊದಲ ಬಾರಿಗೆ ಮಗು ಎರಡು ತಿಂಗಳ ಹಿಂದೆ ಆಚೆ ಬಂದಾಗ ಅವನು ಅಳೋ ಶಬ್ದ ಏನ್ ಕೇಳ್ದೆ ಅದನ್ನು ಇನ್ನೂ ಮರೆಯೋಕೆ ಸಾಧ್ಯ ಇಲ್ಲ.. ಆದಾದ್ಮೇಲೆ ನಾನು ಒಳಗಡೆನೇ ಇದ್ದೆ.. ಪ್ರತಿ ತಂದೆಗೂ ಮಗುವನ್ನ
ಮೊದಲ ಸರಿ ಎತ್ತಿಕೊಳ್ಳೋ ಆ ಅನುಭವನ ಹೇಳಿಕೊಳ್ಳೋಕೆ ಆಗಲ್ಲ.. ನನಗೆ ಭಗವಂತ ಕೊಟ್ಟಿರೋ ದೊಡ್ಡ ಉಡುಗೊರೆ ನನ್ನ ಜೀವನದಲ್ಲಿ ಅಂದ್ರೆ ಅದು ನನ್ನ್ ಮಗ.. ನಾನ್ ಅದನ್ನ ಸಂಭ್ರಮಿಸ್ತೇನೆ.. ಮಗನ ಹೆಸರು ಇನ್ನೂ ಯಾವುದೂ ತೀರ್ಮಾನ ಆಗಿಲ್ಲ..
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಆದರೆ ನನಗೆ ಆ ರೀತಿ ಎಲ್ಲಾ ಮಗನ್ನ ಹೆಚ್ಚು ಎಕ್ಸ್ಪೋಸ್ ಮಾಡೋದು ಇಷ್ಟ ಇಲ್ಲ.. ಮಕ್ಕಳು ಸಿಂಪಲ್ ಆಗಿ ಬೆಳಿಬೇಕು.. ಪ್ರತಿ ಹಂತದಲ್ಲೂ ಜೀವನ ಏನು ಅನ್ನೋದು ಅವರುಗಳಿಗೆ ಗೊತ್ತಾಗ್ಬೇಕು.. ನಾವ್ ಅಪ್ಪ ಅಮ್ಮ ಆದವ್ರು ತಿಳಿಸ್ತಾ ಹೋಗ್ಬೇಕು.. ನಾವು ಕೂಡ ನಿಜ ಹೇಳ್ಬೇಕು ಅಂದ್ರೆ ಮಧ್ಯಮ ವರ್ಗದ ಕುಟುಂಬದಂತೆನೆ ಬೆಳ್ದಿರೀದು.. ಅಂತಹ
ಮಕ್ಕಳ ಜೊತೆನೇ ನಾವು ಶಾಲೆಯಲ್ಲಿ ಓದಿರೋದು.. ಆದರೆ ಜನರಿಗೆ ಕುಟುಂಬದ ಹಿನ್ನೆಲೆ ನೋಡಿ ಬೇರೆ ಅಭಿಪ್ರಾಯ ಇದೆ.. ಆದರೆ ನಮ್ಮಗಳನ್ನ ಬಹಳ ಸಿಂಪಲ್ ಆಗಿನೇ ಬೆಳೆಸಿದ್ರು.. ಆದರೆ ನಮ್ಮ ಜೊತೆ ಸ್ವಲ್ಪ ದಿನ ಇದ್ದಾಗ ಎಲ್ರಿಗೂ ಗೊತ್ತಾಗತ್ತೆ ಇಲ್ಲಪ್ಪ ಇವನು ನಮ್ ತರ ಸಾಮಾನ್ಯ ಮನುಷ್ಯನೇ ಅಂತ..
ಅದೇ ರೀತಿ ಮಗನಿಗೆ ಒಂದು ಸಾಮಾನ್ಯ ಜೀವನ ಅದು ತಳಮಟ್ಟದ ಜೀವನ ಬಹಳ ಮುಖ್ಯ.. ಆ ಕಾರಣಕ್ಕೆ ನಾವು ಅವನನ್ನ ಜಾಸ್ತಿ ಬಹಿರಂಗ ಮಾಡೊದಿಲ್ಲ.. ಮಗನ ವಿಚಾರದಲ್ಲಿ ಅದು ನನಗೆ ಇಷ್ಟವೂ ಆಗಲ್ಲ ಎಂದಿದ್ದಾರೆ.. ಅಷ್ಟೇ ಅಲ್ಲದೇ ರೇವತಿ ಅವರು ಗರ್ಭಿಣಿಯಾದ
ವಿಚಾರವನ್ನೂ ಸಹ ನಿಖಿಲ್ ಅವರು ಯಾವುದೇ ಸಾಮಾಜಿಕ ಜಾಲತಾಣವಾಗಲಿ ಅಥವಾ ಮಾಧ್ಯಮದ ಮುಂದೆಯಾಗಲಿ ಹೇಳಿಕೊಂಡಿರಲಿಲ್ಲ.. ರೇವತಿ ಅವರ ಹುಟ್ಟುಹಬ್ಬದ ದಿನ ಆಶ್ರಮವೊಂದರಲ್ಲಿ ರೇವತಿ ಅವರನ್ನು ಕಂಡ ಮಾದ್ಯಮದವರು ಕುಮಾರಸ್ವಾಮಿ ಅವರ ಬಳಿ ಪ್ರಶ್ನಿಸಲಾಗಿ ಸೊಸೆ ಗರ್ಭಿಣಿ ಎಂಬ ವಿಚಾರವನ್ನು
ತಿಳಿಸಿದ್ದರು.. ಅದೇನೆ ಆಗಲಿ ಸ್ಟಾರ್ ಗಳ ಮಕ್ಕಳಿಗೆ ಏನೂ ಕಷ್ಟ ಪಡದೇ ಸೆಲಿಬ್ರೆಟಿ ಪಟ್ಟ ದೊರಕಬಾರದು ಅವರ ಸ್ವಂತ ಪರಿಶ್ರಮದಿಂದ ಮಾತ್ರವೇ ಅದು ದಕ್ಕಬೇಕೆಂಬ ಉದ್ದೇಶದಿಂದ ನಿಖಿಲ್ ಅವರು ತೆಗೆದುಕೊಂಡ ನಿರ್ಧಾರ ನಿಜಕ್ಕೂ ಮೆಚ್ಚುವಂತದ್ದೆ.