ಜಾತಕದಲ್ಲಿ ಸೂರ್ಯನು ದುರ್ಬಲನಾಗಿದ್ದರೆ ಈ ಪರಿಹಾರ ಮಾಡಿ, ಸಕಲ ಕಷ್ಟ ನಿವಾರಣೆಯಾಗುವುದು..
ಜಾತಕದಲ್ಲಿ ಸೂರ್ಯನು ದುರ್ಬಲನಾಗಿದ್ದರೆ ಈ ಪರಿಹಾರ ಮಾಡಿ, ಸಕಲ ಕಷ್ಟ ನಿವಾರಣೆಯಾಗುವುದು..
ಗ್ರಹಗಳ ಅಧಿಪತಿಯಾಗಿರುವ ಸೂರ್ಯನು ನಿಮ್ಮ ಜಾತಕದಲ್ಲಿ ದುರ್ಬಲನಾಗಿದ್ದರೆ, ಸ್ಥಾನವನ್ನು ಪ್ರಬಲಗೊಳಿಸಲು ಯಾವೆಲ್ಲಾ ಪರಿಹಾರ ಮಾಡಬಹುದು ಎನ್ನುವುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಮ್ಮ ಜಾತಕದಲ್ಲಿ ಸೂರ್ಯನ ಸ್ಥಾನವು ದುರ್ಬಲವಾಗಿದ್ದರೆ, ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಸಂಬಂಧದಲ್ಲಿ ಅಂತರ ಹೆಚ್ಚಾಗುತ್ತದೆ ಮತ್ತು ಕೆಲವೊಮ್ಮೆ ಅನಗತ್ಯ ಸಮಸ್ಯೆಗಳು ಎದುರಾಗುತ್ತವೆ. ಸೂರ್ಯನು ದುರ್ಬಲನಾಗಿದ್ದರೆ ಪಿತೂರಿಗಳನ್ನು ಎದುರಿಸಬೇಕಾಗುವುದು. ನೀವು ಇಂತಹ ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಇಲ್ಲಿ ತಿಳಿಸಲಾದ ಪರಿಹಾರಗಳೊಂದಿಗೆ, ನಿಮ್ಮ ಜಾತಕದಲ್ಲಿ ಸೂರ್ಯನ ಸ್ಥಾನವನ್ನು ನೀವು ಬಲಪಡಿಸಬಹುದು. ಹಾಗಾದರೆ ಆ ಕ್ರಮಗಳೇನು ಎನ್ನುವುದನ್ನು ತಿಳಿದುಕೊಳ್ಳಿ..ಈ ಪರಿಹಾರದಿಂದ ಪ್ರಸನ್ನನಾಗುವ ಸೂರ್ಯಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯನ ಸ್ಥಾನವು ದುರ್ಬಲವಾಗಿದ್ದರೆ, ಭಾನುವಾರದಂದು ನಿಮ್ಮ ಹಣೆಗೆ ಶ್ರೀಗಂಧವನ್ನು ಹಚ್ಚಲು ಮರೆಯಬೇಡಿ. ಇದಲ್ಲದೆ, ಪ್ರತಿ ಭಾನುವಾರದಂದು ಸೂರ್ಯ ದೇವರ ಉಪವಾಸವನ್ನು ಇಟ್ಟುಕೊಳ್ಳಿ ಮತ್ತು ಸೂರ್ಯ ದೇವರಿಗೆ ನೀರನ್ನು ಅರ್ಪಿಸುವಾಗ, ಖಂಡಿತವಾಗಿಯೂ ಅದರಲ್ಲಿ ಒಂದು ಚಿಟಿಕೆ ಕುಂಕುಮವನ್ನು ಹಾಕಿ. ಭಾನುವಾರದಂದು ಇರುವೆಗಳಿಗೆ ಸಕ್ಕರೆ ನೀಡಿ. ಸಾಧ್ಯವಾದರೆ ಇದನ್ನು ಪ್ರತಿದಿನ ಮಾಡಬೇಕು, ಆದರೆ ನಿಮಗೆ ಅದನ್ನು ಮಾಡಲು ಸಾಧ್ಯವಾಗದಿದ್ದರೆ, ಖಂಡಿತವಾಗಿಯೂ ಭಾನುವಾರದಂದು ಮಾಡಿ.ನಿಮ್ಮ ರಾಶಿಗನುಗುಣವಾಗಿ ಯಾವ ದೇವರನ್ನು ಇಷ್ಟದೈವವನ್ನಾಗಿ ಆರಾಧಿಸಬಹುದು ಗೊತ್ತಾ? ಇಲ್ಲಿದೆ ಮಾಹಿತಿಸೂರ್ಯನನ್ನು ಶಾಂತಗೊಳಿಸಲು ಹೀಗೆ ಮಾಡಿಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯನು ಕೆಟ್ಟ ಸ್ಥಾನದಲ್ಲಿದ್ದರೆ ಅದನ್ನು ನಿವಾರಿಸಲು ಜಪ ಮತ್ತು ಹವನ ಮಾಡಬೇಕು. ಇದಕ್ಕಾಗಿ ಧರ್ಮಗ್ರಂಥಗಳಲ್ಲಿ ನಿರ್ದಿಷ್ಟ ವಿಧಿಯನ್ನು ನೀಡಲಾಗಿದೆ. ಸೂರ್ಯನನ್ನು ಶಾಂತಗೊಳಿಸಲು
, ‘ಓಂ ಘೃಣಿ ಸೂರ್ಯಾಯ ನಮಃ’ ಮತ್ತು ‘ಓಂ ಹ್ರೀಂ ಹ್ರೌಂ ಸೂರ್ಯಾಯ ನಮಃ’ ಎಂಬ ಮಂತ್ರಗಳನ್ನು ಪಠಿಸಿ ಹವನ ಮಾಡಬೇಕು. ಏಳು ಸಾವಿರ ಬಾರಿ ಸೂರ್ಯನ ಮಂತ್ರಗಳನ್ನು ಜಪಿಸಬೇಕೆಂಬ ನಿಯಮವಿದೆ, ಆದರೆ ಕಲಿಯುಗದಲ್ಲಿ ಚತುರ್ಗುಣಿತ ಅಥವಾ 28 ಸಾವಿರ ಬಾರಿ ಯಾವುದೇ ಸೂರ್ಯ ಮಂತ್ರವನ್ನು ಜಪಿಸಿದ ನಂತರ, ಖಂಡಿತವಾಗಿಯೂ ಎಕ್ಕದ ಸಮಿತ್ತಿನಿಂದ ಹವನವನ್ನು ಮಾಡಬೇಕು.ರಾಹು ದೋಷದಿಂದ ಏನೇನು ಸಮಸ್ಯೆಗಳುಂಟಾಗುತ್ತವೆ..? ಇದಕ್ಕೇನು ಪರಿಹಾರ ಗೊತ್ತಾ?..ಈ ತಿಥಿಯಂದು ಜಪ-ಹವನ ಮಾಡಬೇಕುಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸೂರ್ಯನ ದುರ್ಬಲ ಸ್ಥಾನವನ್ನು ಸರಿಪಡಿಸಲು ಯಾವುದೇ ಭಾನುವಾರ, ಸಂಕ್ರಾಂತಿ ಅಥವಾ ಸಪ್ತಮಿ ತಿಥಿಯಂದು ಪಠಣ ಮತ್ತು ಹವನವನ್ನು ಪ್ರಾರಂಭಿಸಬೇಕು. ನೀವು ಇದನ್ನು ನಿಮ್ಮದೇ ಆದ ರೀತಿಯಲ್ಲಿ ಮಾಡಬಹುದು ಅಥವಾ ನೀವು ಇದನ್ನು ಜ್ಯೋತಿಷಿಯ ಮೂಲಕ ನಿರ್ಣಯದೊಂದಿಗೆ ಮಾಡಬಹುದು. ಇದಲ್ಲದೇ ತಜ್ಞರ ಅಭಿಪ್ರಾಯ ಪಡೆದು ಏಳೂವರೆ ಗ್ರಾಂ ಮಾಣಿಕ್ಯವನ್ನು ಚಿನ್ನದಲ್ಲಿ ಮಾಡಿ ಉಂಗುರ ಬೆರಳಿಗೆ ಭಾನುವಾರ ಧರಿಸಬೇಕು. ಆದರೆ ರತ್ನವು ಸಂಪೂರ್ಣ ಮತ್ತು ಶುದ್ಧವಾಗಿರಬೇಕು ಎಂಬುದನ್ನು ನೆನಪಿನಲ್ಲಿಡಿ.ಜಾತಕದಲ್ಲಿ ಮಂಗಳನು ಯಾವ ಸ್ಥಾನದಲ್ಲಿದ್ದರೆ ಮಂಗಳ ದೋಷ ಉಂಟಾಗದು ಗೊತ್ತಾ?ಈ ರತ್ನವನ್ನು ಧರಿಸಬೇಕುಜಾತಕದಲ್ಲಿ ಸೂರ್ಯನ ಸ್ಥಾನವು ಉತ್ತಮವಾಗಿದ್ದರೆ, ಜೀವನವು ಸಾಕಷ್ಟು ಸಂತೋಷವಾಗುತ್ತದೆ. ಎಲ್ಲವೂ ಸರಿಹೋಗಲು ಪ್ರಾರಂಭಿಸುತ್ತದೆ. ಆದರೆ ಸೂರ್ಯನು ಕೆಟ್ಟದಾಗಿದ್ದರೆ, ಪರಿಸ್ಥಿತಿಗಳು ಹದಗೆಡಲು ಪ್ರಾರಂಭಿಸುತ್ತವೆ, ಆದ್ದರಿಂದ ಸೂರ್ಯನನ್ನು ಸುಧಾರಿಸಲು, ನೀವು ಮಾಣಿಕ್ಯವನ್ನು ಸಹ ಧರಿಸಬಹುದು. ಇದನ್ನು ಧರಿಸಲು, ಭಾನುವಾರ, ಬೆಳಿಗ್ಗೆ 10:30 ಕ್ಕೆ ಮೊದಲು, ಗಂಗಾಜಲದಿಂದ ಸ್ನಾನ ಮಾಡಿ, ಮಾಣಿಕ್ಯವನ್ನು ಕೆಂಪು ಚಂದನ, ಕೆಂಪು ಹೂವು ಮತ್ತು ಧೂಪ-ದೀಪದಿಂದ ಪೂಜಿಸಿ, ನಂತರ ಜಪಮಾಲೆಯೊಂದಿಗೆ ಓಂ ಘೃಣಿ ಸೂರ್ಯಾಯ ನಮಃ ಎಂದು ಜಪಿಸಿ ಪ್ರಾಣ ಪ್ರತಿಷ್ಠೆ ಮಾಡಿ ಧರಿಸಿ. ಹೀಗೆ ಮಾಡುವುದರಿಂದ ಸೂರ್ಯನ ಅಶುಭ ಪರಿಣಾಮವನ್ನು ತಪ್ಪಿಸಬಹುದು ಮತ್ತು ಸಕಲ ಐಶ್ವರ್ಯಗಳು ಪ್ರಾಪ್ತಿಯಾಗುತ್ತವೆ. ಇದಲ್ಲದೇ ಪ್ರತಿ ಭಾನುವಾರ ಸೂರ್ಯದೇವನನ್ನು ಸ್ಮರಿಸಿ, ಕಷ್ಟದಲ್ಲಿರುವವರಿಗೆ ದಾನ ಮಾಡಿ.
ಆಚಾರ್ಯ ಶ್ರೀ ಪಂಡಿತ್ ಕೇಶವ ಕೃಷ್ಣಾ ಭಟ್ಟ್ ಭಟ್ 8971498358 ಕಟೀಲು ದುರ್ಗ ಪರಮೇಶ್ವರಿ ಮತ್ತು ಸಿಗಂಧೂರು ಚೌಡೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 5 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ಮೊಬೈಲ್ ನಂ 8971498358