NEWS

ಬಿಟಿವಿ ಟ್ರೋಲ್ ಯಾವ ಹಂತಕ್ಕೆ ಹೋಗಿದೆ ನೋಡಿ..

ಸಾಮಾಜಿಕ ಜಾಲತಾಣವೆಂಬುದು ಟ್ರೋಲ್ ಪೇಜ್ ಗಳು ಇಲ್ಲವಾದರೆ ಉಪ್ಪಿಲ್ಲದ ಊಟವಿದ್ದಂತೆ.. ಇನ್ನು ದಿನನಿತ್ಯದ ಆಗುಹೋಗುಗಳನ್ನು ತಮ್ಮದೇ ಆದ ರೀತಿಯಲ್ಲಿ ವ್ಯಂಗ್ಯ ಮಾಡಿಯೋ ಅಥವಾ ಪೋಸ್ಟ್ ಗಳ ಮೂಲಕವೋ ಜನರಿಗೆ ತಲುಪಿಸಿ ಅದೆಷ್ಟೋ ಬದಲಾವಣೆಗಳಿಗೂ ಸಹ ಟ್ರೋಲ್

ಪೇಜ್ ಗಳು ಕಾರಣವಾಗಿವೆ.. ಅಷ್ಟೇ ಅಲ್ಲದೇ ಕೊರೊನಾ ಸಮಯದಲ್ಲಾಗಬಹುದು ಅಥವಾ ಬೇರೆ ಸಾಕಷ್ಟು ಕಷ್ಟದ ಸಮಯದಲ್ಲಿ ಬಹಳಷ್ಟು ಜನರಿಗೆ ಟ್ರೋಲ್ ಪೇಜ್ ಗಳು ನೆರವಾಗಿವೆ.. ಇನ್ನೂ ಹೇಳಬೇಕೆಂದರೆ ಮನುಷ್ಯನಿಗೆ ಅತಿ

ಮುಖ್ಯವಾಗಿ ಬೇಕಾದ ಮನರಂಜನೆಯನ್ನು ನೀಡುತ್ತಾ ಮನುಷ್ಯ ಆರೋಗ್ಯವಂತನಾಗಿ ಇರುವಲ್ಲಿ ಸಧ್ಯದ ಪರಿಸ್ಥಿತಿಯಲ್ಲಿ ಟ್ರೋಲ್ ಪೇಜ್ ಗಳ ಪಾತ್ರ ಬಹಳ ಮುಖ್ಯವಾಗಿದೆ..

ಇನ್ನು ಇತ್ತ ಕನ್ನಡದ ಪ್ರಖ್ಯಾತ ಖಾಸಗಿ ಸುದ್ದಿ ವಾಹಿನಿಯ ವಿಚಾರಕ್ಕೆ ಬಂದರೆ ಬಿಟಿವಿ ಟ್ರೋಲ್ ಆಗುತ್ತಿರುವುದು ಇದೇ ಮೊದಲೇನಲ್ಲ.. ಸಣ್ಣ ಪುಟ್ಟ ವಿಚಾರಗಳನ್ನು ವಿಜೃಂಭಣೆಯಿಂದ ತೋರಿಸುವ ಮೂಲಕ ಸಾಕಷ್ಟು ಬಾರಿ ಸುದ್ದಿಯಾಗಿತ್ತು ಬಹುಮುಖ್ಯವಾಗಿ ಟ್ರೋಲ್ ಆಗಿತ್ತು..

ಆದರೆ ನಿನ್ನೆ ಬಿಟಿವಿ ಪ್ರಸಾರ ಮಾಡಿದ ಸುದ್ದಿಗಳು ಕೊಟ್ಟ ಹೆಡ್ ಲೈನ್ ಗಳು ರಾಜ್ಯಾದ್ಯಂತ ಒಮ್ಮೆಲೆ ವೈರಲ್ ಆಗಿ ಬಹಳಷ್ಟು ಟೀಕೆಗೆ ಗುರಿಯಾಗಿತ್ತು.. ಇನ್ನೂ ಹೇಳಬೇಕೆಂದರೆ ಪ್ರಖ್ಯಾತ ಮತ್ರಿಕೆಯ ಸಂಪಾದಕರೂ ಸಹ ನಿನ್ನೆ ಬಿಟಿವಿ ಅವರನ್ನು ಟ್ರೋಲ್ ಮಾಡಿದ್ದು ವಿಶೇಷವಾಗಿತ್ತು..

ಇಷ್ಟು ದಿನ ಟ್ರೋಲ್ ಪೇಜ್ ಗಳು ಟ್ರೋಲ್ ಮಾಡೋದು ಬಿಟಿವಿ ಅದನ್ನು ಕಾಮನ್ ಆಗಿ ತೆಗೆದುಕೊಳ್ಳೋದು ಎಲ್ಲವೂ ಸಾಮಾನ್ಯವಾಗಿತ್ತು.. ಆದರೆ ನಿನ್ನೆ ಅಮೂಲ್ಯ ಅವರು ತಾಯಿಯಾದ ವಿಚಾರವನ್ನು ಇಡೀ ರಾಜ್ಯವೇ

ಸಂತೋಷ ಪಡುವ ಸುದ್ದಿ ಎಂದು ಬಿತ್ತರಿಸಿ.. ಇತ್ತ ಓಮಿಕ್ರಾನ್ ನಿಂದ ಆತಂಕಕ್ಕೊಳಗಾಗಿದ್ದ ಜನತೆಗೆ ಮನರಂಜನೆ ನೀಡಿದ ಬಿಟಿವಿ ಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು.. ಇಷ್ಟಕ್ಕೆ ವಿಚಾರ ಇದ್ದಿದ್ದರೆ

ಒಳ್ಳೆಯದಿತ್ತೇನೋ.. ಆದರೆ ಇಂದು ಎಲ್ಲಾ ಟ್ರೋಲ್ ಪೇಜ್ ಗಳ ಬಗ್ಗೆ ಬಿಟಿವಿ ಮತ್ತೊಂದು ಪ್ರೋಗ್ರಾಂ‌ ಮಾಡಿದ್ದು ಟ್ರೋಲ್ ಮಾಡೋರಿಗೆ ಕೆಲಸ ಇಲ್ವಾ.. ಬಿಟ್ಟಿ ಇಂಟರ್ ನೆಟ್.. ಎಂದೆಲ್ಲಾ ಹೇಳಿದ್ದಾರೆ..

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಅಷ್ಟೇ ಅಲ್ಲದೇ ಟ್ರೋಲ್ ಮಾಡೋ ಚಪಲವಾ ಹೀಗೆ ಸಾಕಷ್ಟು ಮಾತನಾಡಿ ಒಂದು ಗಂಟೆಗಳ ಕಾಲ ಕಾರ್ಯಕ್ರಮ ಮಾಡಿತ್ತು.. ಜೊತೆಗೆ ವಿಶ್ವವಾಣಿ ಪತ್ರಿಕೆಯ ಸಂಪಾದಕರ ಬಗ್ಗೆ ಹಾಗೂ ಜ್ಯೋತಿಷಿ ಒಬ್ಬರ ಬಗ್ಗೆಯೂ ಕಾರ್ಯಕ್ರಮದಲ್ಲಿ ಮಾತನಾಡಿದ್ದರು. ಟ್ರೋಲ್ ಪೇಜ್ ಗಳ

ವಿಚಾರವಾದ್ದರಿಂದ ಸಾಕಷ್ಟು ವೀಕ್ಷಣೆಗಳನ್ನೇನೋ ಪಡೆದುಕೊಂಡಿತು.. ಆದರೆ ಇದರ ಪರಿಣಾಮ ಬೇರೆಯೇ ಆಗಿದೆ.. ಹೌದು ಸಧ್ಯ ಟ್ರೋಲ್ ಪೇಜ್ ಗಳು ಮಾತ್ರವಲ್ಲ ಸಾಮಾನ್ಯ ಜನರೂ ಸಹ ಇದೀಗ ಬಿಟಿವಿಯನ್ನು ಟ್ರೋಲ್ ಮಾಡಲಿ ಶುರು ಮಾಡಿದ್ದಾರೆ.. ಸಾಮಾಜಿಕ ಜಾಲತಾಣದ ತುಂಬೆಲ್ಲಾ ಬಿಟಿವಿಯದ್ದೇ ಹವಾ ಎನ್ನುವಂತಾಗಿದೆ..

Related Articles

Leave a Reply

Your email address will not be published. Required fields are marked *

Back to top button