ಕಾಲ ಭೈರವ ದೇವರಿಗೆ: ಅಪ್ಪಿ ತಪ್ಪಿಯೂ ಈ ತಪ್ಪುಗಳು ನಿಮ್ಮಿಂದಾಗದಿರಲಿ..!
ಕಾಲ ಭೈರವ ದೇವರಿಗೆ: ಅಪ್ಪಿ ತಪ್ಪಿಯೂ ಈ ತಪ್ಪುಗಳು ನಿಮ್ಮಿಂದಾಗದಿರಲಿ..!
ಮಾನವಕುಲಕ್ಕೆ ಅಗತ್ಯವಾದ ಜೀವನ ಪಾಠಗಳನ್ನು ನೀಡಲು ಶಿವನು ವಿವಿಧ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾನೆ. ಅಂತಹ ಒಂದು ರೂಪವೆಂದರೆ ಅದುವೇ ಕಾಲ ಭೈರವ ರೂಪ. ಮಹಾದೇವನ ಈ ರೂಪವು ಅತ್ಯಂತ ಉಗ್ರ ಮತ್ತು ಮಾರಣಾಂತಿಕವಾಗಿದೆ ಎನ್ನುವ ನಂಬಿಕೆಯಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಭಗವಾನ್ ಶಿವನು ಹಿಂದೂ ತಿಂಗಳ ಕಾರ್ತಿಕ ಮಾಸದ ಅಷ್ಟಮಿ ತಿಥಿಯಂದು ಕೃಷ್ಣ ಪಕ್ಷದಲ್ಲಿ ಜನಿಸಿದನು.
ಈ ಎಣ್ಣೆಯಲ್ಲಿ ದೀಪ ಬೆಳಗಿ
ಕಾಲಭೈರವ ಜಯಂತಿ ದಿನದಂದು ಭಗವಾನ್ ಭೈರವನನ್ನು ಪೂಜಿಸುವುದರಿಂದ ಆ ವ್ಯಕ್ತಿಯ ಭಯವನ್ನು ತೊಡೆದುಹಾಕಲು ಮತ್ತು ಆತನ ಜೀವನದ ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಆದ್ದರಿಂದ, ಕಾಲಭೈರವನ ಪೂಜೆಯಲ್ಲಿ ಮೊದಲು ಸಾಸಿವೆ ಎಣ್ಣೆಯಿಂದ ತುಂಬಿದ ದೀಪ/ದಿಯಾವನ್ನು ಬೆಳಗಿಸಿ.
ಇದನ್ನು ಶಿವಲಿಂಗಕ್ಕೆ ಅರ್ಪಿಸಿ
ಈ ದಿನದಂದು ಶಿವಲಿಂಗಕ್ಕೆ ಬಿಲ್ವಪತ್ರೆಯ ಮೇಲೆ ”ಓಂ ನಮಃ ಶಿವಾಯ” ಎಂದು ಬರೆದು ಅರ್ಪಿಸಬೇಕು. ಹೀಗೆ ಮಾಡುವುದರಿಂದ ಭಗವಾನ್ ಭೈರವನು ಬಹಳ ಬೇಗನೆ ಸಂತೋಷಪಡುತ್ತಾನೆ ಮತ್ತು ನೀವು ಬೇಡಿದ ವರವನ್ನು ಅನುಗ್ರಹಿಸುತ್ತಾನೆ ಎಂದು ಹೇಳಲಾಗಿದೆ.
ನಾಯಿಗೆ ಇದನ್ನು ನೀಡಿ
ಭೈರವ ದೇವನು ನಾಯಿಯ ಮೇಲೆ ಸವಾರಿ ಮಾಡುತ್ತಾನೆ ಎನ್ನುವ ನಂಬಿಕೆಯಿದೆ. ಈ ಸಂದರ್ಭದಲ್ಲಿ, ಕಪ್ಪು ನಾಯಿಗೆ ಸಿಹಿಯಾದ ಚಪಾತಿ ಮತ್ತು ಬೆಲ್ಲ ಹಾಕಿದ ಅವಲಕ್ಕಿಯನ್ನು ತಿನ್ನಿಸುವುದರಿಂದ ನಿಮ್ಮ ಜೀವನದ ಎಲ್ಲಾ ತೊಡಕುಗಳು ನಿವಾರಣೆಯಾಗುತ್ತದೆ.
ಇದನ್ನು ಪಠಿಸಿ
ದೆವ್ವ ಮತ್ತು ದುಷ್ಟ ಆತ್ಮಗಳ ಪ್ರಭಾವದಲ್ಲಿರುವವರು ಈ ದಿನದಂದು ‘ಓಂ ಕಾಲ ಭೈರವಾಯ ನಮಃ’ ಎನ್ನುವ ಮಂತ್ರವನ್ನು ಪಠಿಸಬೇಕು ಮತ್ತು ಕಾಲ ಭೈರವ ಅಷ್ಟಕವನ್ನು ಪಠಿಸಬೇಕು.
ಮಾಟ ಮಂತ್ರದ ಮುಕ್ತಿಗಾಗಿ
ಮಾಟಮಂತ್ರದ ಪ್ರಭಾವವನ್ನು ತಗ್ಗಿಸಲು ಕಾಲಾಷ್ಟಮಿ ವ್ರತವನ್ನು ಆಚರಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ವ್ರತದ ಪಾರಣಕ್ಕೆ ಮೊದಲು, ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನ ಮಾಡಬೇಕು ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿ.
ಈ ತಪ್ಪನ್ನು ಮಾಡಬೇಡಿ
ಕಾಲಭೈರವ ಜಯಂತಿಯಂದು ಸುಳ್ಳು ಹೇಳುವುದನ್ನು ತಪ್ಪಿಸಬೇಕು ಮತ್ತು ಈ ದಿನ ಯಾರಿಗೂ ತೊಂದರೆ ಕೊಡಬೇಡಿ. ಈ ದಿನ ಹಸು ಮತ್ತು ನಾಯಿಗಳು ಸೇರಿದಂತೆ ಇನ್ನಿತರ ಪ್ರಾಣಿಗಳಿಗೆ ವಿನಃ ಕಾರಣ ತೊಂದರೆಯನ್ನು ನೀಡಬೇಡಿ.