ಕಾಂಗ್ರೆಸ್ ಭವನದಲ್ಲಿದ್ದ ಎಸ್.ಎಂ ಕೃಷ್ಣ ಫೋಟೋಗೆ ಅವಮಾನ
ಮಾಜಿ ಸಿಎಂ ಎಸ್.ಎಂ ಕೃಷ್ಣ ಕಾಂಗ್ರೆಸ್ನಲ್ಲಿ ಎಲ್ಲಾ ರೀತಿಯ ಹುದ್ದೆಗಳನ್ನು ಅಲಂಕರಿಸಿದ್ದರು. ಇತ್ತೀಚಿಗೆ ಪಕ್ಷಕ್ಕೆ ಗುಡ್ ಬೈ ಹೇಳಿ ಬಿಜೆಪಿ ಸೇರಿದ್ದರು.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಭವನದಲ್ಲಿದ್ದ ಎಸ್.ಎಂ ಕೃಷ್ಣ ಅವರ ಫೋಟೋವನ್ನು ಕೈ ಕಾರ್ಯಕರ್ತರು ಹರಿದು ಹಾಕಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ರಾಹುಲ್ ಗಾಂಧಿ, ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಹಲವು ನಾಯಕ ಫೋಟೋ ಹಾಕಲಾಗಿತ್ತು. ಆದರೆ ಎಸ್.ಎಂ ಕೃಷ್ಣ ಅವರ ಪೋಟೋವನ್ನು ಮಾತ್ರ ಕಾರ್ಯಕರ್ತರು ಹರಿದು ಹಾಕದ್ದಾರೆ.
ಈ ಹಿಂದೆ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಭವನಕ್ಕೆ ಬರುವ ವೇಳೆ ಪೋಟೋ ಸರಿಪಡಿಸಲಾಗಿತ್ತು. ಆದರೆ ಅವರು ತೆರಳಿದ ಬಳಿಕ ಮತ್ತೆ ಕೈ ಕಾರ್ಯಕರ್ತರು ಪೋಟೋ ಹರಿದು ಹಾಕಿದ್ದಾರೆ ಎನ್ನಲಾಗಿದೆ. ನಿನ್ನೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ನಿನ್ನೆ ಭೇಟಿ ವೇಳೆ ಎಸ್.ಎಂ ಕೃಷ್ಣ ಫೋಟೋ ಹರಿದ ಸ್ಥಿತಿಯಲ್ಲಿ ಕಂಡು ಬಂದಿದೆ.
ಇನ್ನು ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರು ಕಾಂಗ್ರೆಸ್ನಲ್ಲಿ ಎಲ್ಲಾ ರೀತಿಯ ಹುದ್ದೆಗಳನ್ನು ಅಲಂಕರಿದ್ದರು. ಇತ್ತೀಚಿಗೆ ಕಾಂಗ್ರೆಸ್ಗೆ ಗುಡ್ ಬೈ ಹೇಳಿ ಬಿಜೆಪಿ ಸೇರಿದ್ದರು.